ರಸ್ತೆಯಲ್ಲಿ ರಕ್ತದ ಕಲೆ ಪತ್ತೆ: ನಿಗೂಢತೆ; ಪೊಲೀಸರಿಂದ ಸಮಗ್ರ ತನಿಖೆ

ಕಾಸರಗೋಡು: ನಗರದ ಹೊಸ ಬಸ್ ನಿಲ್ದಾಣಕ್ಕೆ ಸಮೀಪದ ವಲಸೆ ಕಾರ್ಮಿಕರು ವಾಸಿಸುತ್ತಿರುವ ಕ್ವಾರ್ಟರ್ಸ್‌ನ ಎದುರುಗಡೆ ಕೋಟೆಕಣಿ ರಸ್ತೆ ಬಳಿ ನಿನ್ನೆ ರಕ್ತದ ಕಲೆಗಳು ಪತ್ತೆಯಾಗಿ ಅದು ಭಾರೀ ಆತಂಕ ಹಾಗೂ ನಿಗೂಢತೆಗಳಿಗೆ ದಾರಿ ಮಾಡಿಕೊಟ್ಟಿದೆ. ವಿಷಯ ತಿಳಿದ ಕಾಸರಗೋಡು ಪೊಲೀಸರು ತಕ್ಷಣ ಸ್ಥಳಕ್ಕೆ ಆಗಮಿಸಿ ತನಿಖೆ ನಡೆಸಿದರು. ಮಾತ್ರವಲ್ಲ ಶ್ವಾನದಳದವರ ಸಹಾಯದಿಂದಲೂ ತನಿಖೆ ನಡಸಲಾಯಿತು. ಅಲ್ಲಿನ ರಕ್ತದ ಸ್ಯಾಂಪಲ್‌ಗಳನ್ನು ಪೊಲೀಸರು ಅಲ್ಲಿಂದ ಸಂಗ್ರಹಿಸಿದ್ದು, ಅದನ್ನು ರಾಸಾಯನಿಕ ಪರೀಕ್ಷೆಗಾಗಿ ಲ್ಯಾಬ್‌ಗೆ ಕಳುಹಿಸಿಕೊಡಲಾ ಗಿದೆ. ಅದರ ಫಲಿತಾಂಶ ಲಭಿಸಿದ ಬಳಿಕ ವಷ್ಟೇ ರಕ್ತ ಮಾನವರದ್ದೇ ಅಥವಾ ಪ್ರಾಣಿ ಗಳದ್ದೇ ಎಂಬುವುದನ್ನು ಖಾತರಿಪಡಿಸಲು ಸಾಧ್ಯವೆಂದು ಪೊಲೀಸರು ತಿಳಿಸಿದ್ದಾರೆ.  ಪತ್ತೆಯಾದ ರಕ್ತದ ಕಲೆ ಕಾಡು ಹಂದಿ ಅಥವಾ ಮರಬೆಕ್ಕು ಯಾ ಇತರ ಯಾವುದೇ ಜೀವಿಗಳದ್ದಾಗಿರಬಹುದೆಂಬ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ. ಯಾವುದೋ ಜೀವಿಗೆ ವಾಹನ ಢಿಕ್ಕಿ ಹೊಡೆದು, ಅಥವಾ ನಾಯಿಗಳ ಆಕ್ರಮ ಣದಿಂದ ಅಲ್ಲಿ ರಕ್ತ ಬಿದ್ದಿರಬಹುದೆಂದೂ ಪೊಲೀಸರು ಹೇಳುತ್ತಿದ್ದಾರೆ. ರಾತ್ರಿ ವೇಳೆ ಸುರಿದಿರುವು ದರಿಂದಾಗಿ ರಕ್ತದ ಕಲೆಗಳು ಬಹುತೇಕ ನೀರಿನಲ್ಲಿ ಕೊಚ್ಚಿ ಹೋಗಿದೆ. ಆದರೂ ರಕ್ತದ   ಸ್ಯಾಂಪಲ್‌ನ ಪರೀಕ್ಷಾ ವರದಿ ಸಿಕ್ಕಿದ ಬಳಿಕವಷ್ಟೇ ಈ ವಿಷಯದಲ್ಲಿ ಯಾವುದೇ ಅಂತಿಮ ತೀರ್ಮಾನಕ್ಕೆ ಬರಲು ಸಾಧ್ಯವೆಂದು ಪೊಲೀಸರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

You cannot copy content of this page