೧೧೦ ಪ್ಯಾಕೆಟ್ ಹೊಗೆಸೊಪ್ಪು ಉತ್ಪನ್ನ ವಶ: ಓರ್ವ ಸೆರೆ

ಮಂಜೇಶ್ವರ: ಉಪ್ಪಳ ಶಾಲೆ ಪರಿಸರದಲ್ಲಿನ ಗೂಡಂಗಡಿ ಬಳಿ ನಿಂತಿದ್ದ ವ್ಯಕ್ತಿಯಿಂದ ೧೧೦ ಪ್ಯಾಕೆಟ್ ಹೊಗೆಸೊಪ್ಪು ಉತ್ಪನ್ನಗಳನ್ನು ಮಂಜೇಶ್ವರ ಪೊಲೀಸರು ವಶಪಡಿಸಿದ್ದಾರೆ. ಈ ಸಂಬಂಧ ಬಾಕ್ರಬೈಲು ನಿವಾಸಿ ಮೊಯ್ದೀನ್ ಕುಂಞಿ (೫೩)ನನ್ನು ಸೆರೆ ಹಿಡಿಯಲಾಗಿದೆ. ಎಸ್.ಐ. ನಿಖಿಲ್ ಹಾಗೂ ತಂಡ ಪಟ್ರೋಲಿಂಗ್ ನಡೆಸುತ್ತಿದ್ದಾಗ ಶಂಕೆ ತೋರಿ ತಪಾಸಣೆ ನಡೆಸಿದಾಗ ಮೊಯ್ದೀನ್ ಕುಂಞಿಯ ಬಳಿ ಇದ್ದ ಚೀಲದಲ್ಲಿ  ಮಾಲು ಪತ್ತೆಯಾಗಿದೆ. ಪೊಲೀಸರಾದ ಶುಕೂರ್, ಶ್ರೀಜಿತ್ ಸಹಕರಿಸಿದ್ದರು.

Leave a Reply

Your email address will not be published. Required fields are marked *

You cannot copy content of this page