ಆರಾಧನಾಲಯಗಳಲ್ಲಿ ಸುಡುಮದ್ದು ಪ್ರದರ್ಶನಕ್ಕೆ ನಿಷೇಧ: ಮೇಲ್ಮನವಿ ವಿಚಾರಣೆ ನ.೧೪ರಂದು

ಎರ್ನಾಕುಳಂ: ಆರಾಧನಾಲಯ ಗಳಲ್ಲಿ ಸುಡುಮದ್ದು ಪ್ರದರ್ಶನಕ್ಕೆ ನಿಷೇಧ ಹೇರಿ ಹೈಕೋರ್ಟ್‌ನ ಏಕಸದಸ್ಯ ಪೀಠ ನೀಡಿರುವ ತೀರ್ಪಿನ ವಿರುದ್ಧ ರಾಜ್ಯ ಸರಕಾರ ಮೇಲ್ಮನವಿ ಸಲ್ಲಿಸಿದ್ದು, ಅದನ್ನು ಹೈಕೋರ್ಟ್‌ನ ವಿಭಾಗೀಯ ಪೀಠ ನ.೧೪ರಂದು ವಿಚಾರಣೆಗಾಗಿ ಕೈಗೆತ್ತಿಕೊಳ್ಳಲಿದೆ.

ಅರ್ಜಿಯಲ್ಲಿ ಎತ್ತದೇ ಇರುವ ವಿಷಯದಲ್ಲಿ ಹೈಕೋರ್ಟ್‌ನ ಏಕಸದಸ್ಯ ಪೀಠ ತೀರ್ಪು ನೀಡಿದೆ. ಮಾತ್ರವಲ್ಲ, ರಾತ್ರಿ ವೇಳೆ ಅಂದರೆ ಎಲ್ಲರಿಗೂ ಅನು ಕೂಲಕರವಲ್ಲದ ಸಮಯದಲ್ಲಿ ಸುಡುಮದ್ದು ಪ್ರದರ್ಶನ ನಡೆಸಬಾರ ದೆಂದು ಏಕಸದಸ್ಯ ಪೀಠ ನೀಡಿರುವ ಆದೇಶದಲ್ಲಿ ಸರಿಯಾದ ಸಮಯದ ಬಗ್ಗೆ ಯಾವುದೇ ರೀತಿಯ ಸ್ಪಷ್ಟನೆ ನೀಡ ಲಾಗಿಲ್ಲ. ಆರಾನಾಲಯಗಳಲ್ಲಿ ಅನಧಿಕೃತವಾಗಿ ಪಟಾಕಿಗಳನ್ನು ದಾಸ್ತಾನು ಇರಿಸಲಾಗಿದೆ ಎಂದು ಯಾರೂ ದೂರು ನೀಡಿಲ್ಲ. ಆದರೂ ಆರಾಧನಾಲ ಯಗಳಲ್ಲಿ ಪಟಾಕಿಗಳ ದಾಸ್ತಾನು ಇರಿಸಲಾಗಿದೆಯೇ ಎಂಬುದನ್ನು ಪರಿಶೀಲಿಸಬೇಕೆಂದು ತೀರ್ಪಿನಲ್ಲಿ ನಿರ್ದೇಶ ನೀಡಲಾಗಿದೆ. ದೇವಸ್ಥಾನಗಳಲ್ಲಿ ಸುಡುಮದ್ದು ನಡೆಸಲು ಸುಪ್ರೀಂ ಕೋರ್ಟ್ ಈ ಹಿಂದೆ  ರಿಯಾಯಿತಿ ನೀಡಿರುವ ವಿಷಯವನ್ನೂ ಮೇಲ್ಮನವಿ ಯಲ್ಲಿ ಸರಕಾರ ವಿಭಾಗೀಯ ಪೀಠದ ಗಮನಕ್ಕೆ ತಂದಿದೆ. ತೃಶೂರ್ ಪೂರಂ ಮತ್ತು ಆರಾಟ್‌ಪುಳ ಪೂರಂ ಉತ್ಸವಗಳ ವೇಳೆ ಸುಡುಮದ್ದು ಪ್ರದರ್ಶನಕ್ಕೆ ಸುಪ್ರೀಂಕೋರ್ಟ್ ನೀಡಿರುವ ತೀರ್ಪಿನ ಪ್ರತಿಯನ್ನೂ ವಿಭಾಗೀಯ ಪೀಠಕ್ಕೆ ಮೇಲ್ಮನವಿ ಜೊತೆಗೆ ಸರಕಾರ ಸಲ್ಲಿಸಿದೆ.

ಎರ್ನಾಕುಳಂ ಮರಟ್ ಕ್ಷೇತ್ರದಲ್ಲಿ ನಡೆಸಲಾಗುವ ಸುಡುಮದ್ದು ಪ್ರದರ್ಶನಕ್ಕೆ ನಿಷೇಧ ಹೇರಬೇಕೆಂದು ವ್ಯಕ್ತಿಯೋರ್ವ ಸಲ್ಲಿಸಿದ್ದ ಅರ್ಜಿಯನ್ನು ಪರಿಶೀಲಿಸಿದ ಬಳಿಕ ರಾತ್ರಿ ವೇಳೆ ಆರಾ ಧನಾಲಯಗಳಲ್ಲಿ ಸುಡುಮದ್ದು ಪ್ರಯೋಗದ ಮೇಲೆ ನಿಷೇಧ ಹೇರಿ ಹೈಕೋರ್ಟ್‌ನ ಏಕಸದಸ್ಯ ಪೀಠ ಕಳೆದ ಶುಕ್ರವಾರ ಆದೇಶ ನೀಡಿತ್ತು. ಅದರ ವಿರುದ್ಧ ಸರಕಾರ ಈಗ ಮೇಲ್ಮನವಿ ಸಲ್ಲಿಸಿದೆ. ಮಾತ್ರವಲ್ಲ, ಮುಜುರಾಯಿ ಮಂಡಳಿಗಳೂ ಶೀಘ್ರ ಮೇಲ್ಮನವಿ ಸಲ್ಲಿಸಲು ತೀರ್ಮಾನಿಸಿವೆ.

Leave a Reply

Your email address will not be published. Required fields are marked *

You cannot copy content of this page