ಹೊಸದುರ್ಗ: ಬಿಎಂಎಸ್ ಆಟೋ ಚಾಲಕನ್ನು ಮುಖವಾಡ ಧರಿಸಿದ ತಂಡ ತಡೆದು ನಿಲ್ಲಿಸಿ ಹಲ್ಲೆಗೈದ ಘಟನೆ ನಡೆದಿದೆ. ಗಂಭೀರ ಗಾಯಗೊಂಡ ಕಾಞಂಗಾಡ್ ಬಿಎಂಎಸ್ ಕಾರ್ಯಕರ್ತ ಭಾಸ್ಕರ (೫೦) ಇಂದು ಬೆಳಿಗ್ಗೆ ಆಟೋದಲ್ಲಿ ಮನೆಯಿಂದ ಪೇಟೆಗೆ ಬರುತ್ತಿದ್ದ ೫ ಮಂದಿಯ ತಂಡ ತಡೆದು ನಿಲ್ಲಿಸಿ ಹಲ್ಲೆ ನಡೆಸಿದೆ. ಭಾಸ್ಕರರ ಬೊಬ್ಬೆಕೇಳಿ ಸ್ಥಳೀಯರು ಓಡಿ ಬಂದಾಗ ಆರೋಪಿಗಳು ಪರಾರಿಯಾದರು. ಹಲ್ಲೆಗೆ ಕಾರಣವೇನೆಂದು ತಿಳಿದುಬಂದಿಲ್ಲ.