ಯುಪಿಎಸ್‌ಟಿ ಉದ್ಯೋಗಾರ್ಥಿಗಳಿಂದ ಮುಖ್ಯಮಂತ್ರಿಗೆ ಮನವಿ

ಕಾಸರಗೋಡು: ಸಾರ್ವಜನಿಕ ಶಿಕ್ಷಣ ಇಲಾಖೆ ಯುಪಿಎಸ್‌ಟಿ ಕನ್ನಡ ವಿಭಾಗ ಹುದ್ದೆಗೆ ಲೋಕಸೇವಾ ಆಯೋಗ ಅರ್ಜಿ ಆಹ್ವಾನಿಸಿದ್ದು, ಆದರೆ ಇದಕ್ಕೆ ಅರ್ಜಿ ಸಲ್ಲಿಸಲು ಕೆಲವು ತೊಂದರೆಗಳು ಇದೆ ಎಂದು ಉದ್ಯೋಗಾರ್ಥಿಗಳು ತಿಳಿಸಿದ್ದಾರೆ. ಯುಪಿ ಶಾಲೆಗೆ ಅಧ್ಯಾಪಕ ನೇಮಕ ಕೆಟಗರಿ ನಂಬ್ರ ೪೭೮/೨೦೨೩ರಂತೆ ಆಹ್ವಾನಿಸಿದ ಅರ್ಜಿಯಲ್ಲಿ ತಿಳಿಸಿದ ಸೂಚನೆಗಳು ಹಾಗೂ ಪಿಎಸ್‌ಸಿ ಸೈಟ್‌ನಲ್ಲಿರುವ ಸೂಚನೆಗಳು ವಿಭಿನ್ನವಾಗಿದ್ದು, ಇದರಿಂದ ಅರ್ಜಿ ಸಲ್ಲಿಸಲು ಅಸಾಧ್ಯವಾಗುತ್ತಿದೆ ಎಂದು ಉದ್ಯೋಗಾರ್ಥಿಗಳು ತಿಳಿಸುತ್ತಾರೆ. ಕಾಸರಗೋಡಿನ ಕನ್ನಡ ಮಾಧ್ಯಮ ಅಧ್ಯಾಪಕರು ಹಲವು ಕಾಲದಿಂದ ಈ ಹುದ್ದೆಗಾಗಿ ಕಾಯುತ್ತಿದ್ದು, ಆದರೆ ಈಗ ಅರ್ಜಿ ಆಹ್ವಾನಿಸಿದರೂ ಅರ್ಜಿ ಸಲ್ಲಿಸಲಾಗದ ಸ್ಥಿತಿ ನಿರ್ಮಾಣವಾಗಿದೆ. ಕನ್ನಡ ಪ್ರಥಮ ಭಾಷೆಯಾಗಿ ಎಸ್‌ಎಸ್‌ಎಲ್‌ಸಿವರೆಗೆ ಕಲಿತು ಬಳಿಕ ವಿವಿಧ ಪದವಿ ಪಡೆದು ಬಿಎಡ್ ಗಳಿಸಿದವರಿಗೆ ಈಗ ಅರ್ಜಿ ಸಲ್ಲಿಸಲು ಸಾಧ್ಯವಾಗುವುದಿಲ್ಲ. ಕಾರಣ ಪಿಎಸ್‌ಸಿ ಸೈಟ್‌ನಲ್ಲಿ ಬಿಎಡ್ ಕನ್ನಡ ಎಂದು ಸೂಚಿಸಲಾಗಿರುವುದೆ ಪ್ರತಿಕೂಲವಾಗಿರು ವುದು. ಅದೇ ರೀತಿ ನೋಟಿಫಿಕೇ ಶನ್‌ನಲ್ಲಿ ಯಾವುದಾದರೂ ವಿಷಯದಲ್ಲಿ ಪದವಿ ಹಾಗೂ ಕೆಟೆಟ್ ಸೆಟ್, ನೆಟ್ ಎಂದು ದಾಖಲಿಸಲಾ ಗಿದ್ದು, ಪಿಎಸ್‌ಸಿ ಸೈಟ್‌ನಲ್ಲಿ ಸೆಟ್ ಆರ್ಟ್ಸ್ ಎಂದು ಕಂಡು ಬರುತ್ತದೆ. ಇದರಿಂದಾಗಿ ಸಯನ್ಸ್ ಅಥವಾ ಕಾಮರ್ಸ್‌ನಲ್ಲಿ ಪದವಿ ಪಡೆದವರಿಗೆ ಅರ್ಜಿ ಸಲ್ಲಿಸಲು ಆಗದ ಸ್ಥಿತಿ ಇದೆ. ಇದೇ ರೀತಿ ಕೆಟೆಟ್ ಕೆಟಗರಿ ಮೂರು ಮತ್ತು ಕೆಟಗರಿ ನಾಲ್ಕು ವಿಭಾಗದವರಿಗೆ ಅರ್ಜಿ ಸಲ್ಲಿಸಲು ಅವಕಾಶ ವಿಲ್ಲ ಎಂದೂ ನೋಟಿಫಿಕೇಶನ್‌ನಲ್ಲಿ ಸೂಚಿಸಲಾಗಿದೆ. ಇದು ಹಲವಾರು ಉದ್ಯೋಗಾರ್ಥಿಗಳಿಗೆ ನಿರಾಸೆ ತಂದಿದೆ. ಈ ಎಲ್ಲಾ ಸಮಸ್ಯೆಗಳನ್ನು ಪರಿಹರಿಸಿ ಉದ್ಯೋಗಾರ್ಥಿಗಳ ಸಮಸ್ಯೆ ನಿವಾರಿಸಬೇಕೆಂದು ಯುಪಿಎಸ್‌ಟಿ ಉದ್ಯೋಗಾರ್ಥಿಗಳು ನವಕೇರಳ ಸಭೆಗಾಗಿ ತಲುಪಿದ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ರಿಗೆ ಮನವಿ ನೀಡಿದ್ದಾರೆ. ಶೀಘ್ರ ಪರಿಹಾರವಾಗಬಹುದೆಂಬ ನಿರೀಕ್ಷೆಯನ್ನು ಕನ್ನಡ ಯುಪಿಎಸ್‌ಸಿ ಉದ್ಯೋಗಾರ್ಥಿಗಳು ಹೊಂದಿದ್ದಾರೆ.

Leave a Reply

Your email address will not be published. Required fields are marked *

You cannot copy content of this page