ತೆಂಗಿನ ಮರದ ಮೇಲೆ ಸಿಲುಕಿದ ಯುವಕನ ರಕ್ಷಣೆ

ನೀಲೇಶ್ವರ: ತೆಂಗಿನ ಕಾಯಿ ಕೊಯ್ಯಲೆಂದು ಮರಕ್ಕೇರಿದ ಯುವಕ ಬಳಿಕ ಕೆಳಕ್ಕಿಳಿಯಲು ಸಾಧ್ಯವಾಗದೆ ಅಲ್ಲಿ ಸಿಲುಕಿಕೊಂಡಾಗ ಅಗ್ನಿಶಾಮಕದಳ ಆಗಮಿಸಿ ಆತನನ್ನು ರಕ್ಷಿದ ಘಟನೆ ನಡೆದಿದೆ. ನೀಲೇಶ್ವರ ತೆಕ್ಕನ್ ಬಂಗಳ ಚಿರಮ್ಮಲ್ ಫಾತಿಮ ಪರಂಬಿಲ್‌ನ   ಖಾಸಗಿ ಹಿತ್ತಿಲ ೩೦ ಫೀಟ್ ಎತ್ತರದ ತೆಂಗಿನ ಮರಕ್ಕೆ ತಾಯನ್ನೂರು ನಿವಾಸಿಯೋರ್ವ ತೆಂಗಿನಕಾಯಿ ಕೊಯ್ಯಲೆಂದು ಮರವೇರಿದ್ದನು. ಬಳಿಕ ಆತನಿಗೆ  ಇಳಿಯಲು ಸಾಧ್ಯವಾಗದೆ ಅಲ್ಲೇ ಸಿಲುಕಿಕೊಂಡಿ ದ್ದನು. ಆ ಬಗ್ಗೆ ನೀಡಿದ ಮಾಹಿತಿ ಯಂತೆ ಹೊಸದುರ್ಗ ಅಗ್ನಿಶಾಮ ಕದಳ ಆಗಮಿಸಿ ಆತನನ್ನು ರಕ್ಷಿಸಿದ್ದಾರೆ.

Leave a Reply

Your email address will not be published. Required fields are marked *

You cannot copy content of this page