ಅಪಾಯದಂಚಿನಲ್ಲಿ ಸುದೆಂಬಳ ಸಂಕ : ವಾಹನ ಸಂಚಾರಕ್ಕೆ ಆತಂಕ

ಉಪ್ಪಳ: ಸಂಕದಲ್ಲಿ ಕಬ್ಬಿಣದ ತಡೆಬೇಲಿ ಮುರಿದು ಈ ಮೂಲಕ ಸಂಚಾರ ಭೀತಿ ಉಂಟಾಗಿರುವುದಾಗಿ ದೂರಲಾಗಿದೆ. ಪೈವಳಿಕೆ ಪಂಚಾ ಯತ್ ವ್ಯಾಪ್ತಿಯ ಬಳ್ಳೂರು- ಕನಿಯಾಳ ಲೋಕೋ ಪಯೋಗಿ ಇಲಾಖೆ ರಸ್ತೆಯ ಸುದೆಂಬಳದ ಲ್ಲಿರುವ ಸಂಕ ಅಪಾಯದಂಚಿನ ಲ್ಲಿದೆ. ರಸ್ತೆ ಅಗಲವಿದ್ದರೂ ಸಂಕ ಕಿರಿದಾಗಿದ್ದು, ಇದರ ಎರಡೂ ಕಡೆಗಳಲ್ಲಿರುವ ಕಬ್ಬಿಣದ ತಡೆಬೇಲಿ ಜೀರ್ಣಾವಸ್ಥೆಯಲ್ಲಿದ್ದು, ಕಾಂಕ್ರೀಟ್ ಬೀಮ್ ಮುರಿದು ಬೀಳುವ ಭೀತಿ ಎದುರಾಗಿದೆ. ಈ ಸಂಕದ ಮೂಲಕ ಬೃಹತ್ ಲಾರಿಗಳು ಸಂಚರಿಸುತ್ತಿದ್ದು,  ಈ ವೇಳೆ ಅಪಾಯ ಸಂಭವಿಸುವ ಸಾಧ್ಯತೆ ಇದೆ. ಉಪ್ಪಳದಿಂದ ಮುಳಿಗದ್ದೆ, ಬಳ್ಳೂರು ದಾರಿಯಾಗಿ ಕನಿಯಾಲಕ್ಕೆ ಬಸ್ ಸಂಚಾರ ಸಹಿತ ನೂರಾರು ವಾಹನಗಳು ಈ ಮೂಲಕ ಸಾಗುತ್ತಿವೆ. ಸಂಕ ಕುಸಿದು ಬಿದ್ದಲ್ಲಿ ಸಂಚಾರ ಮೊಟಕುಗೊಳ್ಳುವ ಭೀತಿ ಇದೆ ಎಂದು ಸಾರ್ವಜನಿಕರು ಸೂಚಿಸಿದ್ದಾರೆ. ಅಪಾಯ ಸಂಭವಿಸುವ ಮೊದಲು ಎಚ್ಚೆತ್ತು ಸಂಕವನ್ನು ದುರಸ್ತಿಗೊಳಿಸಲು ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.

Leave a Reply

Your email address will not be published. Required fields are marked *

You cannot copy content of this page