ಆರಿಕ್ಕಾಡಿ ಕೋಟೆಯೊಳಗೆ ಬೆಂಕಿ ಆಕಸ್ಮಿಕ

ಕುಂಬಳೆ: ತಂಡವೊಂದು ನಿಧಿ ಶೋಧ ನಡೆಸಿದ ಆರಿಕ್ಕಾಡಿ ಕೋಟೆಯಲ್ಲಿ ನಿನ್ನೆ ಸಂಜೆ ಬೆಂಕಿ ಹತ್ತಿಕೊಂಡ ಘಟನೆ ನಡೆದಿದೆ. ವಿಷಯ ತಿಳಿದು ತಲುಪಿದ ಪೊಲೀ ಸ್, ಅಗ್ನಿಶಾಮಕದಳ, ನಾಗರಿಕರ ಸಹಾಯದಿಂದ ಬೆಂಕಿ ನಂದಿಸಿದೆ. ಬೆಂಕಿ ಹೇಗೆ ಹತ್ತಿಕೊಂಡಿದೆಯೆಂದು ತಿಳಿದು ಬಂದಿಲ್ಲ.

ಈ ಮೊದಲು ಕೋಟೆಯೊಳಗೆ ಕಾಡು ತುಂಬಿಕೊಂ ಡಿದ್ದುದರಿಂದ ಅದರೊಳಗೆ ನಡೆಯುತ್ತಿದ್ದ ಯಾವುದೇ ಚಟುವಟಿಕೆ ಹೊರಗೆ  ತಿಳಿ ಯುತ್ತಿರಲಿಲ್ಲ. ಇದೀಗ ಕಾಡು ಬೆಂಕಿಗಾಹುತಿಯಾದುದರಿಂದ ಕೋಟೆಯೊಳಗೆ ಇನ್ನು ಮುಂದೆ ನಡೆಯುವ ಚಟುವಟಿಕೆ ಕೂಡಲೇ ತಿಳಿದು ಬರಲಿದೆಯೆಂದು ನಾಗರಿ ಕರು ತಿಳಿಸುತ್ತಿದ್ದಾರೆ.

Leave a Reply

Your email address will not be published. Required fields are marked *

You cannot copy content of this page