ಉತ್ತರಕ್ರಿಯೆಗೆ ಸಹಾಯಹಸ್ತ ಚಾಚಿದ ಸದಾಶಿವ ಶೆಟ್ಟಿ ಅಭಿಮಾನಿ ಸೇವಾ ಬಳಗ
ಪೈವಳಿಕೆ: ಬಾಯಾರು ಬೆರಿಪದವು ಸದಾಶಿವ ಶೆಟ್ಟಿ ಅಭಿಮಾನಿ ಸೇವಾ ಬಳಗದವರು ವಿವಿಧ ಸಹಾಯಹಸ್ತ ನೀಡುತ್ತಿದ್ದು, ಇತ್ತೀಚೆಗೆ ನಿಧನರಾದ ಬಳ್ಳೂರು ನಿವಾಸಿ ಚೋಮರ ಉತ್ತರಕ್ರಿಯೆಯ ವ್ಯವಸ್ಥೆ ಯನ್ನು ಮಾಡಿ ಪ್ರಶಂಸೆಗೆ ಪಾತ್ರರಾಗಿದ್ದಾರೆ. ಚೋಮ ರವರ ವೈದ್ಯಕೀಯ ಚಿಕಿತ್ಸೆ, ಮನೆ ದುರಸ್ತಿಗಳಿಗೆ ಈ ಮೊದಲು ಸೇವಾ ಬಳಗ ಸಹಾಯ ಮಾಡಿದ್ದು, ನಿಧನದ ಬಳಿಕ ಅಂತ್ಯಕ್ರಿಯೆ ನಡೆಸಲು ಕುಟುಂಬ ಅಶಕ್ತವಾದ ಹಿನ್ನೆಲೆಯಲ್ಲಿ ಬಳಗದ ವತಿಯಿಂದ ಆರ್ಥಿಕ ಸಹಾಯ ನೀಡಲಾಯಿತು.