ಕನ್ನಡಿಗರ ಭಾವನೆಗೆ ನೋವು: ಸೋನು ನಿಗಮ್ ವಿರುದ್ಧ ಪೊಲೀಸ್‌ಗೆ ದೂರು

ಬೆಂಗಳೂರು: ಸಂಗೀತ ಕಾರ್ಯಕ್ರಮದ ಮಧ್ಯೆ ಕನ್ನಡಿಗರಿಗೆ ನೋವುಂಟುಮಾಡುವ ರೀತಿಯ ಪರಾಮರ್ಶೆ ನಡೆಸಿದ ಗಾಯಕ ಸೋನು ನಿಗಮ್ ವಿರುದ್ಧ ದೂರು ನೀಡಲಾಗಿದೆ. ಕನ್ನಡಪರ ಸಂಘಟನೆಯಾದ ಕರ್ನಾಟಕ ರಕ್ಷಣಾ ವೇದಿಕೆ ಬೆಂಗಳೂರು ಇದರ ಜಿಲ್ಲಾಧ್ಯಕ್ಷ ದೂರು ನೀಡಿದ್ದಾರೆ. ಭಾಷಾ ಪರವಾದ ವಿಂಗಡನೆಗೆ, ಆಕ್ರಮಣಕ್ಕೆ ಕಾರಣವಾಗುವುದಾಗಿದೆ ಸೋನು ನಿಗಮ್‌ರ ಪರಾಮರ್ಶೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಎಪ್ರಿಲ್ 25, 26ರಂದು ಬೆಂಗಳೂರಿನ ಖಾಸಗಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಪ್ರಸ್ತುತ ಪಡಿಸಿದ ಸಂಗೀತ ಕಾರ್ಯಕ್ರಮದಲ್ಲಿ  ಕೇಸಿಗೆ ಆಸ್ಪದವಾದ ಘಟನೆ ಸಂಭವಿಸಿದೆ.

ಕನ್ನಡ ಹಾಡು ಹಾಡಲು ಓರ್ವ ವಿದ್ಯಾರ್ಥಿ ಆಗ್ರಹಿಸಿದಾಗ ಸೋನು ನಿಗಮ್ ಕೋಪಗೊಂಡು ‘ಪಹಲ್ಗಾಮ್‌ನಲ್ಲಿ ಸಂಭವಿಸಿರುವುದರ ಹಿಂದಿನ ಕಾರಣವು ಇದೇ ಆಗಿದೆ’ ಎಂದು ಪ್ರತಿಕ್ರಿಯಿಸಿದ್ದರು. ಕನ್ನಡ ಹಾಡು ಹಾಡಬೇಕೆಂಬ ಬೇಡಿಕೆ ಯನ್ನು ಪಹಲ್ಗಾಮ್  ಉಗ್ರಗಾಮಿ ಆಕ್ರಮಣಕ್ಕೆ ಹೋಲಿಸಿದ ಸೋನು ನಿಗಮ್‌ರ ನಿಲುವು ಪ್ರತಿಭಟನೆಗೆ ಕಾರಣವಾಗಿದೆ.

Leave a Reply

Your email address will not be published. Required fields are marked *

You cannot copy content of this page