ಕರ್ನಾಟಕ ಮದ್ಯ ಸಹಿತ ಓರ್ವನ ಸೆರೆ
ಪೆರ್ಲ: ಪೆರ್ಲ ಅಬಕಾರಿ ತಪಾ ಸಣಾ ಕೇಂದ್ರದಲ್ಲಿ ಅಬಕಾರಿ ತಂಡ ನಿನ್ನೆ ನಡೆಸಿದ ಕಾರ್ಯಾ ಚರಣೆಯಲ್ಲಿ 7.200 ಲೀಟರ್ ಕರ್ನಾಟಕ ಮದ್ಯ ಪತ್ತೆಹಚ್ಚಿ ವಶಪಡಿಸಿಕೊಂಡಿದೆ. ಇದಕ್ಕೆ ಸಂಬಂಧಿಸಿ ಬದಿಯಡ್ಕ ಚೆನ್ನಡ್ಕದ ಮನೋಜ್ ಕುಮಾರ್ 33) ಎಂಬಾತನನ್ನು ಬಂಧಿಸಿ ಪ್ರಕರಣ ದಾಖಲಿಸಲಾಗಿದೆ. ಬಂಧಿತನನ್ನು ನಂತರ ನ್ಯಾಯಾಲಯದ ಆದೇಶ ಪ್ರಕಾರ ನ್ಯಾಯಾಂಗ ಬಂಧನದಲ್ಲಿರಿ ಸಲಾಗಿದೆ. ಕಾಸರಗೋಡು ರೇಂಜ್ ಎಕ್ಸೈಸ್ ಇನ್ಸ್ಪೆಕ್ಟರ್ ಜೋಸೆಫ್ ಜೆ.ಯವರ ನೇತೃತ್ವದಲ್ಲಿ ಅಸಿಸ್ಟೆಂಟ್ ಎಕ್ಸೈಸ್ ಇನ್ಸ್ಪೆಕ್ಟರ್ ವಿನಯರಾಜ್ ಪಿ.ಕೆ, ಪ್ರಿವೆಂಟಿವ್ ಆಫೀಸರ್ ಸುಮೋದ್ ಕುಮಾರ್ ಎಂ.ವಿ, ಮತ್ತು ಸಿವಿಲ್ ಎಕ್ಸೈಸ್ ಆಫೀಸರ್ ಪ್ರಸನ್ನ ಕುಮಾರ್ ವಿ. ಎಂಬವರ ನೇತೃತ್ವದ ಅಬಕಾರಿ ಕೆಮು ತಂಡ ಈ ಕಾರ್ಯಾಚರಣೆ ನಡೆಸಿದೆ.