ಕಲಿಕಾಸಮಸ್ಯೆ ಪರಿಹಾರಕ್ಕೆ ತಲುಪಿದ ವಿದ್ಯಾರ್ಥಿನಿಗೆ ಲೈಂಗಿಕ ಚೇಷ್ಠೆ: ಅರ್ಚಕ ಸೆರೆ

ಕಲ್ಲಿಕೋಟೆ: ಕ್ಷೇತ್ರಕ್ಕೆ ತಲುಪಿದ 17ರ ಹರೆಯದ ವಿದ್ಯಾರ್ಥಿನಿ ವಿರುದ್ಧ  ಲೈಂಗಿಕ ಆಕ್ರಮಣ ನಡೆಸಿದ ಬಗ್ಗೆ ದೂರಲಾಗಿದೆ. ಘಟನೆಯಲ್ಲಿ ಕ್ಷೇತ್ರದ ಅರ್ಚಕನನ  ಸೆರೆಹಿಡಿಯಲಾಗಿದೆ. ಪೇರಾಂಬ್ರ ಮುದುವಣ್ಣಾಚ್ಚಕ್ಕಿಚ್ಚ ಪರಂಬ್‌ನ ನಿವಾಸಿ ವಿನೋದ್ (50)ನನ್ನು ಪೊಲೀಸರು ಬಂಧಿಸಿ ದ್ದಾರೆ. ಕಳೆದ 20ರಂದು ಮಧ್ಯಾಹ್ನ ಸಂಬಂಧಿಕರ ಜೊತೆ ವಿದ್ಯಾರ್ಥಿನಿ ಕ್ಷೇತ್ರಕ್ಕೆ ತಲುಪಿದ್ದಳು. ಕಲಿಕೆಯಲ್ಲಿನ ಸಮಸ್ಯೆಗಳನ್ನು  ಪರಿಹರಿಸುವುದಕ್ಕಾಗಿ  ಅರ್ಚಕನನ್ನು ಕಾಣಲೆಂದು ವಿದ್ಯಾರ್ಥಿನಿ ಕ್ಷೇತ್ರಕ್ಕೆ ತಲುಪಿದ್ದಳು.  ಈ ವೇಳೆ  ವಿದ್ಯಾರ್ಥಿನಿಯನ್ನು ಮಾತ್ರವೇ ಕೊಠಡಿಯೊಳಗೆ ಕರೆದುಕೊಂಡು ಹೋಗಿ ಆಕೆಯ ದೇಹ ಸ್ಪರ್ಶಿಸಿರುವುದಾಗಿ ದೂರಲಾ ಗಿದೆ.  ಹೊರಗೆ ಬಂದ ವಿದ್ಯಾರ್ಥಿನಿ ಹೆತ್ತವರಲ್ಲಿ ವಿಷಯ ತಿಳಿಸಿದ್ದು, ಬಳಿಕ ಪೇರಾಂಬ್ರ ಪೊಲೀಸರಿಗೆ ದೂರು ನೀಡಲಾಗಿದೆ.  ಪಾಲೇರಿ ವೆಂಗಶ್ಶೇರಿ ಕಾವು ಮಹಾವಿಷ್ಣು ಕ್ಷೇತ್ರದ ಅರ್ಚಕನಾಗಿದ್ದಾನೆ ವಿನೋದ್. ಈತನನ್ನು ಸೆರೆಹಿಡಿಯಲಾಗಿದೆ.

Leave a Reply

Your email address will not be published. Required fields are marked *

You cannot copy content of this page