ಕಲೆ, ಸಾಹಿತ್ಯ, ಸಾಂಸ್ಕೃತಿಕ ಕ್ಷೇತ್ರದಲ್ಲಿ ಗಡಿನಾಡಿನ ಕಾಳಜಿ ಪ್ರೇರಣದಾಯಿ- ಸಚಿವ ಚೆಲುವರಾಯ ಸ್ವಾಮಿ
ಸೀತಾಂಗೋಳಿ: ಬಹುಭಾಷಾ ನೆಲೆ ಗಟ್ಟಿನ ಕಾಸರಗೋಡಿನಲ್ಲಿ ಕನ್ನಡವನ್ನು ಇನ್ನೂ ಕಾಯ್ದುಕೊಂಡು ಬೆಂಬಲಿಸುತ್ತಿರುವುದು ಸ್ತುತ್ಯಾರ್ಹವಾಗಿದ್ದು, ಪತ್ರಕರ್ತರ ಕೊಡುಗೆಯು ಮಹತ್ವಪೂರ್ಣವಾಗಿದೆ ಎಂದು ಕರ್ನಾಟಕ ಕೃಷಿ ಸಚಿವ ಎನ್. ಚೆಲುವರಾಯ ಸ್ವಾಮಿ ನುಡಿದರು. ಕಲೆ, ಸಾಹಿತ್ಯ, ಸಾಂಸ್ಕೃತಿಕ ಕ್ಷೇತ್ರದಲ್ಲಿ ಗಡಿನಾಡು ಕಾಸರಗೋಡಿನ ಕಾಳಜಿ ಪ್ರೇರಣದಾಯಿ. ಭಾಷೆ, ಸಂಸ್ಕೃತಿಗೆ ಇಲ್ಲಿನ ಪತ್ರಿಕೆಗಳು ನೀಡುತ್ತಿರುವ ಜವಾಬ್ದಾರಿಯುತ ಕಾಳಜಿಯೇ ಕನ್ನಡ ಶುದ್ಧ ಸುಂದರವಾಗಿ ಉಳಿದುಕೊಳ್ಳಲು ಕಾರಣ ಎಂದು ಅವರು ಪ್ರಶಂಸಿಸಿದರು. ಕಾಸರಗೋಡು ಜಿಲ್ಲಾ ಕನ್ನಡ ಮಾಧ್ಯಮ ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘ, ಕರ್ನಾಟಕ ಗಡಿ ಪ್ರದೇಶಾಭಿವೃದ್ಧಿ ಪ್ರಾಧಿಕಾರ ಬೆಂಗಳೂರು, ಕರ್ನಾಟಕ ಪ್ರವಾಸೋದ್ಯಮ ಇಲಾಖೆ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಬೆಂಗಳೂರು ಇದರ ಆಶ್ರಯದಲ್ಲಿ ಶನಿವಾರ ಸೀತಾಂಗೋಳಿ ಅಲಯನ್ಸ್ ಸಮಾವೇಶ ಸೆಂಟರ್ನಲ್ಲಿ ನಡೆದ ನಾಲ್ಕನೇ ವರ್ಷದ ದತ್ತಿನಿಧಿ ಪ್ರಶಸ್ತಿ ಪ್ರದಾನ ಹಾಗೂ ಕನ್ನಡ ಸಂಸ್ಕೃತಿ ಉತ್ಸವದ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಎಡನೀರು ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಉಪಸ್ಥಿತರಿದ್ದು, ಆಶೀರ್ವಚನ ನೀಡಿದರು. ಉದ್ಯಮಿ ಕೆ.ಕೆ. ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಇನ್ನೋರ್ವ ಉದ್ಯಮಿ ಸದಾಶಿವ ಶೆಟ್ಟಿ ಕುಳೂರು ಅವರನ್ನು ಇದೇ ವೇಳೆ ಪೌರ ಸನ್ಮಾನ ನೀಡಿ ಗೌರವಿಸಲಾಯಿತು. ಶಾಸಕ ಎಕೆಎಂ ಅಶ್ರಫ್, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಮುಖ್ಯ ಅತಿಥಿಗಳಾಗಿ ಭಾಗವಹಿ ಸಿದರು. ಕರ್ನಾಟಕ ಗಡಿ ಪ್ರದೇಶಾಭಿವೃದ್ಧಿ ಪ್ರಾಧಿಕಾರದ ಸದಸ್ಯ ಸಂಜೀವ ಕುಮಾರ್ ಅತಿವಾಳೆ, ಶಿವ ರೆಡ್ಡಿ ಕ್ಯಾಡೆದ್ ಉಪಸ್ಥಿತರಿದ್ದರು. ಅರಿಬೈಲು ಗೋಪಾಲ ಶೆಟ್ಟಿ, ಸುಕುಮಾರ ಕುದ್ರೆಪ್ಪಾಡಿ, ಶಂಕರ ಡಿ, ಎನ್. ಚನಿಯಪ್ಪ ನಾಯ್ಕ, ಟಿ.ಎಂ. ಶಹೀದ್, ಕಾರ್ತಿಕ್ ಶೆಟ್ಟಿ ಭಾಗವಹಿಸಿದರು. ಇದೇ ವೇಳೆ ಜಿಲ್ಲೆಯ ಪತ್ರಕರ್ತರಾದ ಅಜಿತ್ ಸ್ವರ್ಗ, ಭಾಸ್ಕರ ಕೆ., ಗಣೇಶ್ ಕಾಸರಗೋಡು, ಪತ್ರಿಕೋದ್ಯಮಿ ಯಾಗಿದ್ದ ಗಣೇಶ್ ಕೆ. ಸಹಿತ ೨೧ ಮಂದಿಗೆ ದತ್ತಿನಿಧಿ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಇದೇ ವೇಳೆ ಜಯಂತ ಪಾಟಾಳಿ, ಡಿ. ಶಂಕರ, ಪಿಯಾದಾ ಕ್ರಾಸ್ತಾರಿಗೆ ಸಾಧಕ ಅಭಿನಂದನೆ ನಡೆಯಿತು.
ನೂತನವಾಗಿ ಆರಂಭಗೊಂಡ ನಿವೃತ್ತ ಪತ್ರಕರ್ತರಿಗಿರುವ ಪಿಂಚಣಿ ವಿತರಣೆಗೆ ಶಿವಾನಂದ ತಗಡೂರು ಚಾಲನೆ ನೀಡಿದರು. ಮಲಾರ್ ಜಯರಾಮ ರೈ, ರಾಧಾಕೃಷ್ಣ ಕೆ. ಉಳಿಯತ್ತಡ್ಕ ಹಾಗೂ ಅಚ್ಯುತ ಚೇವಾರ್ ರಿಗೆ ಪಿಂಚಣಿ ಪತ್ರ ವಿತರಿಸಲಾಯಿತು. ಸ್ವಾಗತ ಸಮಿತಿ ಕಾರ್ಯಾಧ್ಯಕ್ಷ ಶಿವಶಂಕರ ನೆಕ್ರಾಜೆ, ಕೆ.ಯು.ಡಬ್ಲ್ಯು.ಜೆ ಕಾಸರಗೋಡು ಇದರ ಅಧ್ಯಕ್ಷ ಎ.ಆರ್. ಸುಬ್ಬಯ್ಯಕಟ್ಟೆ, ಪ್ರಧಾನ ಸಂಚಾಲಕ ನ್ಯಾಯವಾದಿ ಥೋಮಸ್ ಡಿಸೋಜ, ಸಂಚಾಲಕ ರಾಮಪ್ಪ ಮಂಜೇಶ್ವರ, ಡಿ. ಕೃಷ್ಣದಾಸ್, ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಎ. ಗಂಗಾಧರ್ ತೆಕ್ಕೇಮೂಲೆ, ಕೋಶಾಧಿಕಾರಿ ಕೆ. ಶ್ರೀಕಾಂತ್ ನೆಟ್ಟಣಿಗೆ, ಅಧ್ಯಕ್ಷ ರವಿ ನಾಯ್ಕಾಪು, ಅಖಿಲೇಶ್ ನಗುಮುಗಂ, ರಾಜೇಶ್ ಕುದ್ರೆಪ್ಪಾಡಿ, ಪವನ್ ಕುಮಾರ್, ಅಪ್ಪಣ್ಣ ಸೀತಾಂಗೋಳಿ, ಮಹಾಲಿಂಗ ಕೆ. ಉಪಸ್ಥಿತರಿದ್ದರು. ರಚನಾ ಕುದ್ರೆಪ್ಪಾಡಿ, ಸಂತೋಷ್ ಆರ್ಟ್ಸ್ ಆಂಡ್ ಸ್ಪೋರ್ಟ್ಸ್ ಕ್ಲಬ್ ಸೀತಾಂಗೋಳಿ ಸಹಕರಿಸಿದರು. ಕೆ.ಎನ್. ನಾಗೇಶ್ ಬೆಂಗಳೂರು ಇವರಿಂದ ನಾಡಗೀತೆ, ಹರಿದಾಸ ಜಯಾನಂದ ಕುಮಾರ್ ಹೊಸದುರ್ಗ ಇವರಿಂದ ಪ್ರಾರ್ಥನೆ ಗೀತೆ ನಡೆಯಿತು. ಥೋಮಸ್ ಡಿಸೋಜಾ ಸ್ವಾಗತಿಸಿ, ರವಿ ನಾಯ್ಕಾಪು ಪ್ರಸ್ತಾ ವಿಸಿದರು. ಗಂಗಾಧರ ತೆಕ್ಕೇಮೂಲೆ ವಂದಿಸಿ ದರು. ರಫೀಕ್ ಮಾಸ್ತರ್ ನಿರೂಪಿಸಿದರು.