ಕಲ್ಯೋಟ್: ಯೂತ್ ಕಾಂಗ್ರೆಸ್ ಕಾರ್ಯಕರ್ತರ ಅವಳಿ ಕೊಲೆ ಪ್ರಕರಣ ; ಸಿಬಿಐ ನ್ಯಾಯಾಲಯದಲ್ಲಿ ವಿಚಾರಣೆ ಪೂರ್ಣ

ಕಾಸರಗೋಡು: ಇಡೀ ರಾಜ್ಯವನ್ನೇ ನಡುಗಿಸಿದ್ದ ಪೆರಿಯಾ ಕಲ್ಯೋಟ್ ನಿವಾಸಿಗಳು ಹಾಗೂ ಯೂತ್ ಕಾಂಗ್ರೆಸ್ ಸಕ್ರಿಯ ಕಾರ್ಯಕರ್ತರು ಆಗಿದ್ದ ಶರತ್ಲಾಲ್ (23) ಮತ್ತು ಕೃಪೇಶ್ (19)ರನ್ನು ಕೊಲೆಗೈದ ಪ್ರಕರಣದ ವಿಚಾರಣೆ ಎರ್ನಾಕುಳಂನಲ್ಲಿರುವ ಸಿಬಿಐ ವಿಶೇಷ ನ್ಯಾಯಾಲಯದಲ್ಲಿ ಪೂರ್ಣಗೊಂಡಿದೆ. ಇದರಿಂದಾಗಿ ಈ ಕೊಲೆ ಪ್ರಕರಣದ ತೀರ್ಪು ಶೀಘ್ರ ಹೊರ ಬರಲಿದೆ.
2019 ಫೆಬ್ರವರಿ 17ರಂದು ರಾತ್ರಿ 7.45ರ ವೇಳೆಗೆ ಪೆರಿಯಾ ಕಲ್ಯೋಟ್ನಲ್ಲಿ ಕೃಪೇಶ್ ಮತ್ತು ಶರತ್ಲಾಲ್ರನ್ನು ಕಡಿದು ಬರ್ಬರವಾಗಿ ಕೊಲೆಗೈಯ್ಯಲಾಗಿತ್ತು. ಈ ಕೊಲೆ ಪ್ರಕರಣದ ಬಗ್ಗೆ ಮೊದಲು ಬೇಕಲ ಪೊಲೀಸರು ತನಿಖೆ ನಡೆಸಿದ್ದರು. ನಂತರ ತನಿಖೆಯನ್ನು ಕ್ರೈಮ್ ಬ್ರಾಂಚ್ ವಿಭಾಗಕ್ಕೆ ಹಸ್ತಾಂತರಿಸಲಾಗಿತ್ತು. ಆದರೆ ಈ ಕೊಲೆ ಪ್ರಕರಣದ ತನಿಖೆ ಸರಿಯಾದ ರೀತಿಯಲ್ಲಿ ನಡೆಯುತ್ತಿಲ್ಲವೆಂದು ಆದ್ದರಿಂದ ಇದರ ತನಿಖೆಯನ್ನು ಸಿಬಿಐಗೆ ಹಸ್ತಾಂತರಿಸಬೇಕೆAದು ಕೊಲೆಗೈಯ್ಯಲ್ಪಟ್ಟ ಯೂತ್ ಕಾಂಗ್ರೆಸ್ ಕಾರ್ಯಕರ್ತರಿಬ್ಬರ ಮನೆಯವರು ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು. ಅದನ್ನು ಪುರಸ್ಕರಿಸಿದ ಹೈಕೋರ್ಟ್ ನಂತರ ನೀಡಿದ ನಿರ್ದೇಶ ಪ್ರಕಾರ ಈ ಕೊಲೆ ಪ್ರಕರಣದ ತೀರ್ಪನ್ನು ಬಳಿಕ ಸಿಬಿಐಗೆ ಹಸ್ತಾಂತರಿಸಲಾಗಿತ್ತು. ಅದರಂತೆ ಸಿಬಿಐ ಈ ಪ್ರಕರಣದ ಬಗ್ಗೆ ಸಮಗ್ರ ತನಿಖೆ ನಡೆಸಿ ಎರ್ನಾಕುಳಂನಲ್ಲಿರುವ ಸಿಬಿಐ ವಿಶೇಷ ನ್ಯಾಯಾಲಯಕ್ಕೆ ಚಾಜ್ಶೀðಟ್ ಸಲ್ಲಿಸಿತ್ತು. ಈ ಕೊಲೆ ಪ್ರಕರಣದಲ್ಲಿ ಒಟ್ಟು 24 ಆರೋಪಿಗಳು ಒಳಗೊಂಡಿದ್ದರು.
ಸಿಪಿಎA ಪೆರಿಯ ಲೋಕಲ್ ಸಮಿತಿ ಸದಸ್ಯರಾಗಿದ್ದ ಪೀತಾಂಭರನ್, ಸಜಿ ಜೋರ್ಜ್ , ಸುರೇಶ್, ಅನಿಲ್, ಗಿಜಿನ್ ಗಂಗಾಧರನ್, ಅಶ್ವಿನ್, ಶ್ರೀರಾಜ್, ಸುಭೀಶ್, ಮುರಳಿ, ರಂಜಿತ್, ಪ್ರದೀಪ್- ಕುಟ್ಟನ್, ಮಣಿಕಂಠನ್, ಹೊಸದುರ್ಗ ಬ್ಲೋಕ್ ಪಂಚಾಯತ್ ಅಧ್ಯಕ್ಷ ಕೆ. ಮಣಿಕಂಠನ್, ಸಿಪಿಎಂ ಪೆರಿಯಾ ಲೋಕಲ್ ಸಮಿತಿ ಕಾರ್ಯದರ್ಶಿ ಬಾಲಕೃಷ್ಣನ್, ಸುರೇಂದ್ರನ್, ಶಾಸ್ತ ಮಧು, ಹರಿಪ್ರಸಾದ್, ಮಾಜಿ ಶಾಸಕ ಕೆ.ಪಿ. ಕುಂuಟಿಜeಜಿiಟಿeಜರಾಮನ್, ರಜಿ ವರ್ಗೀಸ್ ಮತ್ತು ರಾಜೇಶ್ ಯಾನೆ ರಾಜ ಮೊದಲಾದವರು ಈ ಕೊಲೆ ಪ್ರಕರಣದ ಆರೋಪಿಗಳಾಗಿದ್ದಾರೆ. ಈ ಆರೋಪಿಗಳ ಪೈಕಿ ಒಂದರಿAದ 11ರ ತನಕದ ಆರೋಪಿಗಳನ್ನು ಆರೂವರೆ ವರ್ಷಗಳ ಹಿಂದೆ ಬಂಧಿಸಲಾಗಿತ್ತು. ಅಂದಿನಿAದ ಈ ತನಕ ಅವರು ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲೇ ಕಳೆಯುತ್ತಿದ್ದಾರೆ. ಇತರ ಆರೋಪಿಗಳಾದ ಮಣಿಕಂಠನ್ ಸೇರಿದಂತೆ ಮೂವರಿಗೆ ನ್ಯಾಯಾಲಯ ಜಾಮೀನು ಮಂಜೂರು ಮಾಡಿತ್ತು.
ಸಿಬಿಐ ಪರ ಸ್ಪೆಷಲ್ ಪ್ರೋಸಿಕ್ಯೂಟರ್ ಬೋಬಿ ಜೋಸೆಫ್ ಮತ್ತು ಅಸಿಸ್ಟೆಂಟ್ ಪ್ರೋಸಿಕ್ಯೂಟರ್ ನ್ಯಾ. ಕೆ. ಪದ್ಮನಾಭನ್ ನ್ಯಾಯಾಲಯದಲ್ಲಿ ವಾದಿಸಿದರು.

RELATED NEWS

You cannot copy contents of this page