ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕರುಣ್ ತಾಪಾ ನಿಧನ
ಕಾಸರಗೋಡು: ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕರುಣ್ ತಾಪ (65) ಕಲ್ಲಿಕೋಟೆಯಲ್ಲಿರುವ ಪುತ್ರಿಯ ಮನೆಯಲ್ಲಿ ನಿನ್ನೆ ರಾತ್ರಿ ನಿಧನ ಹೊಂದಿದರು. ಇವರು ಅಸೌಖ್ಯದಿಂದ ತಿಂಗಳುಗಳಿಂದ ಚಿಕಿತ್ಸೆಯಲ್ಲಿದ್ದರು.
ಮೂಲತಃ ಮೇಲ್ಪರಂಬ ಪಳ್ಳಿಪ್ರಂ ನಿವಾಸಿಯಾಗಿರುವ ಕರುಣ್ತಾಪಾ ವಿದ್ಯಾನಗರ ಚಾಲ ರಸ್ತೆಯ ತಾಪಾ ಹೌಸ್ನಲ್ಲಿ ವಾಸಿಸುತ್ತಿದ್ದರು. ಕಾಂಗ್ರೆಸ್ನ ಕಾಸರಗೋಡು ಬ್ಲೋಕ್ ಉಪಾಧ್ಯಕ್ಷ ಹಾಗೂ ಯುಡಿಎಫ್ನ ಕಾಸರಗೋಡು ಮಂಡಲ ಸಂಚಾಲಕರಾಗಿಯೂ ಇವರು ಸೇವೆ ಸಲ್ಲಿಸಿದ್ದರು. ದೀರ್ಘಕಾಲ ವಿದೇಶದಲ್ಲೂ ದುಡಿದಿದ್ದರು. ಮಾತ್ರವಲ್ಲದೆ ಓರ್ವ ನಿಷ್ಠಾವಂತ ಸಮಾಜಸೇವಕರೂ ಆಗಿದ್ದರು.
ದಿ| ಕುಟ್ಟಿಯಾನ್- ಚಿರುದಾ ಪಳ್ಳಿಪುರಂ ದಂಪತಿಯ ಪುತ್ರನಾದ ಕರುಣ್ ತಾಪಾ ಪತ್ನಿ ಸರೋಜಿನಿ, ಮಕ್ಕಳಾದ ಶೀತಲ್ (ನೆದರ್ಲ್ಯಾಂಡ್), ಶಮಿ (ಆಸ್ಟ್ರೇಲಿಯಾ), ಡಾ. ಶ್ವೇತಾ (ಕಲ್ಲಿಕೋಟೆ), ಅಳಿಯಂದಿರಾದ ಉಲ್ಕೃಷ್, ವಿನಯ್, ಡಾ. ರಾಹುಲ್, ಸಹೋದರರಾದ ಉಮೇಶನ್, ಭಾಸ್ಕರನ್, ಬಾಲಕೃಷ್ಣನ್, ಪುತ್ರಿ ಪುಷ್ಪ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ಕರುಣಾ ತಾಪಾರ ನಿಧನಕ್ಕೆ ಕಾಂಗ್ರೆಸ್ ಸೇರಿದಂತೆ ಇತರ ಹಲವು ಪಕ್ಷಗಳ ನೇತಾರರು ಹಾಗೂ ವಿವಿಧ ವಲಯಗಳ ಗಣ್ಯರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಕರುಣ್ ತಾಪಾರ ಮೃತದೇಹವನ್ನು ಕಾಸರಗೋಡಿಗೆ ತಂದು ವಿದ್ಯಾನಗರದಲ್ಲಿರುವ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಸಾರ್ವಜನಿಕರ ಅಂತ್ಯದರ್ಶನಕ್ಕಾಗಿ ಇರಿಸಲಾಯಿತು. ಅಂತ್ಯ ಸಂಸ್ಕಾರ ನಾಳೆ ನಡೆಯಲಿದೆ.