ಕಾಂಬೋಡಿಯಾಕ್ಕೆ ತೆರಳಿದ ಬಂದ್ಯೋಡು ಬಳಿಯ ನಿವಾಸಿ ಮಾಹಿತಿ ಅಲಭ್ಯ-ದೂರು
ಕುಂಬಳೆ: ಉದ್ಯೋಗ ನಿಮಿತ್ತ ಕಾಂಬೋಡಿಯಾಕ್ಕೆ ಹೋದ ಯುವಕನ ಕುರಿತು ಯಾವುದೇ ಮಾಹಿತಿಯಿಲ್ಲವೆಂದು ತಿಳಿಸಿ ಪೊಲೀಸರಿಗೆ ದೂರು ನೀಡಲಾಗಿದೆ.
ಬಂದ್ಯೋಡು ಅಡ್ಕ ಮೆಹಮೂದ್ ಮಂಜಿಲ್ನ ಮೊಹಮ್ಮದ್ ಮುನೀರ್ (25)ರ ಕುರಿತು ಮಾಹಿತಿ ಇಲ್ಲವೆಂದು ದೂರಲಾಗಿದೆ. ಈ ಬಗ್ಗೆ ಸಹೋದರಿ ಮನ್ಸೀನ ನೀಡಿದ ದೂರಿನಂತೆ ಕುಂಬಳೆ ಪೊಲೀಸರು ಕೇಸು ದಾಖಲಿಸಿ ತನಿಖೆ ಆರಂಭಿಸಿದ್ದಾರೆ.
ಮೊಹಮ್ಮದ್ ಮುನೀರ್ 2022ರಲ್ಲಿ ಉದ್ಯೋಗಕ್ಕೆಂದು ತಿಳಿಸಿ ಕಾಂಬೋಡಿಯಾಕ್ಕೆ ತೆರಳಿದ್ದಾರೆ. ಆದರೆ ಕಳೆದ ಎರಡು ತಿಂಗಳಿಂದ ಅವರ ಕುರಿತು ಯಾವುದೇ ಮಾಹಿತಿಯಿಲ್ಲ. ಫೋನ್ ಕರೆ ನೀಡಿದರೂ ಸಂಪರ್ಕಕ್ಕೆ ಸಿಗುತ್ತಿಲ್ಲವೆಂದು ದೂರಿನಲ್ಲಿ ತಿಳಿಸಲಾಗಿದೆ.