ಕಾರು ಢಿಕ್ಕಿ ಹೊಡೆದು ಬೈಕ್ ಸವಾರ ಮೃತ್ಯು: ಮದ್ಯದ ಅಮಲಿನಲ್ಲಿ ಕಾರು ಚಲಾಯಿಸಿದ ಟೆನಿ ಜೋಪನ್ ಕಸ್ಟಡಿಗೆ
ಕೊಲ್ಲಂ: ಕೊಟ್ಟಾರಕ್ಕರದಲ್ಲಿ ವಾಹನ ಅಪಘಾತಕ್ಕೀಡಾಗಿ ಬೈಕ್ ಸವಾರ ಮೃತಪಟ್ಟರು. ಇಂಜಕ್ಕಾಡ್ ನಿವಾಸಿ ಶೈನ್ (34) ಮೃತಪಟ್ಟವರು. ನಿಯಂತ್ರಣ ತಪ್ಪಿದ ಕಾರು ಬೈಕ್ಗೆ ಢಿಕ್ಕಿ ಹೊಡೆದು ಅಪಘಾತ ಉಂಟಾಗಿದೆ. ಕಾರನ್ನು ಚಲಾಯಿಸಿದ ಟೆನಿ ಜೋಪನ್ನನ್ನು ಪೊಲೀಸರು ಕಸ್ಟಡಿಗೆ ತೆಗೆದಿದ್ದಾರೆ. ದಿ| ಮಾಜಿ ಮುಖ್ಯಮಂತ್ರಿ ಉಮ್ಮನ್ಚಾಂಡಿಯವರ ಪರ್ಸನಲ್ ಸ್ಟಾಫ್ ಆಗಿದ್ದ ವ್ಯಕ್ತಿಯಾಗಿದ್ದಾನೆ ಟೆನಿಜೋಪನ್. ಈ ವ್ಯಕ್ತಿ ಮದ್ಯದಮಲಿನಲ್ಲಿದ್ದನೆಂದು ಪೊಲೀಸರು ತಿಳಿಸಿದ್ದಾರೆ. ನಿನ್ನೆ ಸಂಜೆ ೬ ಗಂಟೆಗೆ ಪುತ್ತೂರು- ಕೊಟ್ಟಾರಕ್ಕರ ರಸ್ತೆಯಲ್ಲಿ ಅವಣೂರು ಎಂಬಲ್ಲಿ ಅಪಘಾತ ಸಂಭವಿಸಿದೆ. ವೆಂಡಾರಿನಿಂದ ಕೊಟ್ಟಾರಕ್ಕರೆಗೆ ತೆರಳುತ್ತಿದ್ದ ಜೋಪನ್ನ ಕಾರು ರಸ್ತೆಯ ಬಲ ಬದಿಯಲ್ಲಿ ಸಾಗಿ ಎದುರು ಭಾಗದಿಂದ ಬರುತ್ತಿದ್ದ ಬೈಕ್ಗೆ ಢಿಕ್ಕಿ ಹೊಡೆದಿದೆ.
ಚರಂಡಿಗೆ ಬಿದ್ದ ಬೈಕ್ ಸವಾರ ಶೈನ್ರನ್ನು ತಾಲೂಕು ಆಸ್ಪತ್ರೆಗೆ ತಲುಪಿಸಲಾ ಯಿತಾದರೂ ಆ ವೇಳೆಗೆ ಮೃತಪಟ್ಟಿದ್ದಾರೆ. ನರಹತ್ಯಾ ಪ್ರಕರಣ ದಾಖಲಿಸಿ ಟೆನಿಜೋಪನ್ ವಿರುದ್ಧ ಕೇಸು ದಾಖಲಿಸಲಾಗಿದೆ.