ಕಾರ್ಮಿಕ ನಾಪತ್ತೆ
ಬದಿಯಡ್ಕ: ಕೆಲಸಕ್ಕೆಂದು ಮನೆಯಿಂದ ಹೋದ ಯುವಕ ನಾಪತ್ತೆಯಾದ ಬಗ್ಗೆ ಬದಿಯಡ್ಕ ಪೊಲೀಸರಿಗೆ ದೂರು ನೀಡಲಾಗಿದೆ. ನೀರ್ಚಾಲು ಪೆರಡಾಲ ಇಕ್ಕೇರಿಯ ಅಪ್ಪ ವಿ.ವಿ ಎಂಬವರ ಮಗ ಪ್ರಕಾಶನ್ ವಿ.ವಿ (41) ನಾಪತ್ತೆಯಾಗಿ ರುವುದಾಗಿ ಪತ್ನಿ ಊರ್ವಶಿ ದೂರು ನೀಡಿದ್ದು ಅದರಂತೆ ಬದಿಯಡ್ಕ ಪೊಲೀಸರು ಮಿಸ್ಸಿಂಗ್ ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ. ಈ ತಿಂಗಳ ೧೮ರಂದು ಮಧ್ಯಾಹ್ನ ಮನೆ ಪಕ್ಕದ ಹಿತ್ತಿಲಿಗೆ ತೆಂಗಿನಕಾಯಿ ಕೊಯ್ಯಲೆಂದು ಹೋದ ಪ್ರಕಾಶನ್ ನಂತರ ಮನೆಗೆ ಹಿಂತಿರುಗಲಿಲ್ಲವೆಂದು ಪೊಲೀಸರಿಗೆ ನೀಡಿದ ದೂರಿನಲ್ಲ್ಲಿ ಪತ್ನಿ ತಿಳಿಸಿದ್ದಾರೆ.