ಕಾಸರಗೋಡಿನಲ್ಲಿ ಅಬಕಾರಿ ತಂಡದ ಮಿಂಚಿನ ಕಾರ್ಯಾಚರಣೆ: ಹ್ಯಾಶಿಶ್, ಗಾಂಜಾ ಪತ್ತೆ; ಓರ್ವ ಸೆರೆ


ಕಾಸರಗೋಡು: ಕಾಸರಗೋಡು ತಳಂಗರೆ ಪಳ್ಳಿಕ್ಕಾಲ್ನಲ್ಲಿ ರೈಲು ನಿಲ್ದಾಣ ಪರಿಸರದಲ್ಲಿ ಅಬಕಾರಿ ತಂಡ ಇಂದು ಬೆಳಿಗ್ಗೆ ನಡೆಸಿದ ಮಿಂಚಿನ ಕಾರ್ಯಾಚರಣೆಯಲ್ಲಿ ಹ್ಯಾಶಿಶ್ ಮತ್ತು ಗಾಂಜಾ ಪತ್ತೆಹಚ್ಚಿ ವಶಪಡಿಸಿಕೊಂಡಿದೆ.
ಇದಕ್ಕೆ ಸಂಬAಧಿಸಿ ತಳಂಗರೆ ಬಾಂಗೋಡು ಝೀನತ್ ನಗರದ ಅಸ್ಕರ್ಅಲಿ ಬಿ (38) ಎಂಬಾತನನ್ನು ಬಂಧಿಸಿ ಕೇಸು ದಾಖಲಿಸಲಾಗಿದೆ. 212 ಗ್ರಾಂ ಹ್ಯಾಶಿಶ್ ಮತ್ತು 112 ಗ್ರಾಂ ಗಾಂಜಾ ಪತ್ತೆಹಚ್ಚಿ ವಶಪಡಿಸಲಾಗಿದೆ. ಹ್ಯಾಶಿಶ್ಗೆ 1,50,000 ರೂ. ಹಾಗೂ ಗಾಂಜಾಕ್ಕೆ 5000 ರೂ. ಬೆಲೆ ಇರುವುದಾಗಿ ಅಬಕಾರಿ ಅಧಿಕಾರಿಗಳು ತಿಳಿಸಿದ್ದಾರೆ.
ಕಾಸರಗೋಡು ರೇಂಜ್ ಎಕ್ಸೈಸ್ ಇನ್ಸ್ಪೆಕ್ಟರ್ ಜೋಸೆಫ್ ಜೆ ನೇತೃತ್ವದ ಅಬಕಾರಿ ತಂಡ ಈ ಕಾರ್ಯಾಚರಣೆ ನಡೆಸಿದೆ. ಈ ಆರೋಪಿ ಶಂಕಾಸ್ಪದ ರೀತಿಯಲ್ಲಿ ತಿರುಗಾಡುತ್ತಿದ್ದುದನ್ನು ಗಮನಿಸಿದ ಅಬಕಾರಿ ತಂಡ ಆತನನ್ನು ವಶಕ್ಕೆ ತೆಗೆದುಕೊಂಡು ಕೈಯಲ್ಲಿದ್ದ ಚೀಲವನ್ನು ಪರಿಶೀಲಿಸಿದಾಗ ಅದರಲ್ಲಿ ಈ ಮಾದಕಪದಾರ್ಥಗಳು ಪತ್ತೆಯಾಗಿದೆ. ತಕ್ಷಣ ಆತನನ್ನು ಮಾಲು ಸಹಿತ ಸೆರೆಹಿಡಿದು ಪ್ರಕರಣ ದಾಖಲಿಸಲಾಯಿ ತೆಂದು ಅಬಕಾರಿ ಅಧಿಕಾರಿಗಳು ತಿಳಿಸಿ ದ್ದಾರೆ. ಆರೋಪಿಯ ಚೀಲದಲ್ಲಿ ಇಲೆ ಕ್ಟ್ರೋನಿಕ್ಸ್ ತಕ್ಕಡಿಯನ್ನು ಪತ್ತೆಹಚ್ಚಲಾಗಿದೆ. ಮಾತ್ರವಲ್ಲ ಬಂಧಿತ ಆರೋಪಿಯ ಮೇಲೆ ಕಳೆದ ಒಂದು ತಿಂಗಳಿAದ ತೀವ್ರ ನಿಗಾ ಇರಿಸಲಾಗಿತ್ತೆಂದು ಅಬಕಾರಿ ಅಧಿಕಾರಿ ಗಳು ತಿಳಿಸಿದ್ದಾರೆ. ಈ ಕಾರ್ಯಾಚರಣೆ ನಡೆಸಿದ ತಂಡದಲ್ಲಿ ಅಸಿ. ಎಕ್ಸೈಸ್ ಇನ್ಸ್ಪೆಕ್ಟರ್ ವಿನೋದ್ ಕೆ.ವಿ, ಪ್ರಿವೆಂಟೀವ್ ಆಫೀಸರ್ ರಂಜಿತ್ ಕೆ.ವಿ, ಗೀತಾ ಟಿ.ವಿ, ಪ್ರಶಾಂತ್ ಕುಮಾರ್ ಎ.ವಿ, ಕಣ್ಣನ್ ಕುಂuಟಿಜeಜಿiಟಿeಜ ಟಿ, ಅಮಲ್ಜಿತ್ ಸಿ.ಎಂ ಮತ್ತು ಅಜಯ್ ಟಿ.ಸಿ ಮತ್ತು ಚಾಲಕ ಮೈಕಲ್ ಎಂಬಿವರು ಒಳಗೊಂಡಿದ್ದರು.

Leave a Reply

Your email address will not be published. Required fields are marked *

You cannot copy content of this page