ಕೆಜೆಯುನಿಂದ ಕಾರ್ಮಿಕ ದಿನಾಚರಣೆ

ಕುಂಬಳೆ: ಪತ್ರಕರ್ತರ ಸಂಘ, ಪ್ರೆಸ್ ಪೋರಂ ಕುಂಬಳೆ ನೇತೃತ್ವದಲ್ಲಿ ನಿನ್ನೆ ಕುಂಬಳೆ ಪ್ರೆಸ್ ಪೋರಂ ಕಚೇರಿಯಲ್ಲಿ ಕಾರ್ಮಿಕ ದಿನಾಚರಣೆ ನಡೆಯಿತು. ಕೆಜೆಯು ನಿಕಟಪೂರ್ವ ಜಿಲ್ಲಾಧ್ಯಕ್ಷ ಅಬ್ದುಲ್ ಲತೀಫ್ ಉಳುವಾರ್ ಧ್ವಜಾರೋಹಣ ನಿರ್ವಹಿಸಿದರು.
ಫ್ರೆಸ್ ಪೋರಂ ಪ್ರಧಾನ ಕಾರ್ಯದರ್ಶಿ ಅಬ್ದುಲ್ಲ ಕುಂಬಳೆ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಅನಾರೋಗ್ಯಕ್ಕೊಳಗಾಗಿ ಮಂಗಳೂರಿನ ಆಸ್ಪತ್ರೆಯಲ್ಲಿ ತೀವ್ರ ನಿಗಾ ಘಟಕದಲ್ಲಿ ಅರೆ ಪಜ್ಞಾವಸ್ಥೆಯಲ್ಲಿರುವ ಪತ್ರಕರ್ತ ಧನರಾಜ್ ಉಪ್ಪಳ ಅವರ ಚಿಕಿತ್ಸಾ ನೆರವಿಗೆ ಸಾಧ್ಯವಿದ್ದಷ್ಟು ಕೈಜೋಡಿಸುವುದು ಕಾರ್ಮಿಕ ದಿನಕ್ಕೆ ನಾವು ಸಲ್ಲಿಸುವ ಕೊಡುಗೆಯಾಗಿದೆ. ಅಸಂಘಟಿತ ವಲಯದ ಪತ್ರಕರ್ತರ ಸಂಕಷ್ಟಗಳಿಗೆ ಪರಿಹಾರ ಒದಗಿಸುವಲ್ಲಿ ಇನ್ನೂ ಮಾಧ್ಯಮ ಕ್ಷೇತ್ರ ಸಶಕ್ತವಾಗಿಲ್ಲ ಎಂದು ಅವರು ಕಳವಳ ವ್ಯಕ್ತಪಡಿಸಿದರು. ಫ್ರೆಸ್ ಪೋರಂ ಅಧ್ಯಕ್ಷ ಕೆ.ಎಂ.ಎ.ಸತ್ತಾರ್, ಐ.ಮುಹ್ಮದ್ ರಫೀಕ್, ಭಾಗ್ಯಶ್ರೀ ಶಿರಂತ್ತಡ್ಕ, ಅಶ್ರಫ್ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

You cannot copy content of this page