ಕೊಳತ್ತೂರಿನಲ್ಲಿ ಬೋನಿನೊಳಗೆ ಸಿಲುಕಿದ್ದ ಹೆಣ್ಣು ಚಿರತೆ: ಅರಣ್ಯದಲ್ಲಿ ಬಿಟ್ಟ ಅಧಿಕಾರಿಗಳು

ಕಾಸರಗೋಡು: ಬೇಡಡ್ಕಕ್ಕೆ ಸಮೀಪದ ಕೊಳತ್ತೂರಿನಲ್ಲಿ  ಬೋನಿ ನೊಳಗೆ ಸಿಲುಕಿದ ಚಿರತೆಯನ್ನು ಅರಣ್ಯ ಇಲಾಖೆಯವರು  ಬಳಿಕ ಜಿಲ್ಲೆಯ ವ್ಯಾಪ್ತಿಗೊಳಪಟ್ಟ ರಕ್ಷಿತಾರಣ್ಯ ದಲ್ಲಿ ತೆರೆದುಬಿಟ್ಟಿದ್ದಾರೆ.

ಬೇಡಗಂ ಪಂಚಾಯತ್‌ನೊ ಳಪಟ್ಟ ಕೊಳತ್ತೂರು  ನಿಡುವೋಟಿನ ಎಂ. ಜನಾರ್ದನನ್ ಎಂಬವರ ರಬ್ಬರ್ ತೋಟದಲ್ಲಿ ಅರಣ್ಯ ಇಲಾಖೆ ಇರಿಸ ಲಾಗಿದ್ದ ಬೋನಿನಲ್ಲಿ ನಿನ್ನೆ ರಾತ್ರಿ ವೇಳೆ ಚಿರತೆ ಸಿಲುಕಿತ್ತು . ಎರಡು ದಿನಗಳ ಹಿಂದೆ ಇಲ್ಲಿ ಬೋನು ಸ್ಥಾಪಿಸಲಾಗಿತ್ತು. ಅದರೊಳಗೆ ಅದರ ಇನ್ನೊಂದು ಭಾಗದಲ್ಲಿ  ನಾಯಿಯೊಂ ದನ್ನು ಕಟ್ಟಿಹಾಕಲಾಗಿತ್ತು. ನಾಯಿ ಜೋರಾಗಿ ಬೊಗಳತೊಡಗಿದಾಗ ಅದನ್ನು ಗಮನಿಸಿದ ಸಮೀಪ ಮನೆಯವರು ಅಲ್ಲಿಗೆ ಬಂದು ನೋಡಿದಾಗ ನೋಡಿದ್ದು ಚಿರತೆ ಬೋನಿಗೊಳಗೆ ಸಿಲುಕಿರುವುದನ್ನು ಗಮನಿಸಿದ್ದಾರೆ. ವಿಷಯ ತಿಳಿದು ಇಡೀ ಊರವರು ಅಲ್ಲಿಗೆ ಪ್ರವಹಿಸ ತೊಡಗಿ ದಾಗ ಜನರನ್ನು ಕಂಡ ಚಿರತೆ ಗೂಡಿ ನೊಳಗಿದ್ದುಕೊಂಡೇ ಆಕ್ರಮಣಕ್ಕೆ ಮುಂದಾಗಿದೆ. ವಿಷಯ ತಿಳಿದ ಅರಣ್ಯ ಪಾಲಕರು ತಕ್ಷಣ ಸ್ಥಳಕ್ಕೆ ಆಗಮಿಸಿ ಬೋನನ್ನು ಪ್ಲಾಸ್ಟಿಕ್ ಟರ್ಪಾಲಿನಿಂದ ಮುಚ್ಚಿ ಕೊಳತ್ತುಂಗಾಲಿನಲ್ಲಿರುವ ಅರಣ್ಯ ಇಲಾಖೆಯ ಕಚೇರಿಗೆ ಸಾಗಿಸಿದರು.

ಅರಣ್ಯ ಇಲಾಖೆಗೆ ಸೇರಿದ ಜಿಲ್ಲೆಯ ರಕ್ಷಿತಾರಣ್ಯಕ್ಕೆ ಸಾಗಿಸಿ ಅಲ್ಲಿ ತೆರೆದು ಬಿಟ್ಟಿದ್ದಾರೆ.  ಚಿರತೆಯ ಒಂದು ಕಣ್ಣಿನ ಭಾಗದಲ್ಲಿ ಗಾಯದ ಕಲೆಯಿರುವುದು ಪತ್ತೆಯಾಗಿದೆ. ಫೆಬ್ರವರಿ ೪ರಂದು ರಾತ್ರಿ ಕೊಳತ್ತೂರಿನ ಮಡಂತಕೋ ಡಿನ ಗುಹೆಯಲ್ಲಿ  ಚಿರತೆ ಸಿಲುಕಿಕೊಂ ಡಿತ್ತು. ಅದನ್ನು ಸೆರೆಹಿಡಿ ಯಲು ಅರಣ್ಯ ಪಾಲಕರು ಅದಕ್ಕೆ ಮಾದಕಗುಂಡು ಹಾರಿಸಿದಾಗ ಗುಂಡು ಚಿರತೆಗೆ ತಗಲಿದೆ. ಅದು  ಅಲ್ಲಿಂದ ತಪ್ಪಿಸಿಕೊಂ ಡಿತ್ತು. ಅದಾದ ಬಳಿಕ ವಿಳಿಕುಂಮಾಡಂ, ಆಯಂಕಡವು, ಶಂಕರಂಗೋಡು ಮೊದಲಾದ ಪ್ರದೇಶಗಳಲ್ಲೂ ಚಿರತೆ ಪತ್ತೆಯಾಗಿತ್ತು. ಈ ಹಿನ್ನೆಲೆಯಲ್ಲಿ ಅರಣ್ಯ ಪಾಲಕರು ಹಲವೆಡೆಗಳಲ್ಲಿ ಇನ್ನಷ್ಟು ಬೋನುಗಳು ಹಾಗೂ ಕ್ಯಾಮರಾಗಳನ್ನು ಸ್ಥಾಪಿಸಿದ್ದರು. ಜನರನ್ನು ಭೀತಿಗೊಳಪಡಿ ಸುತ್ತಿರುವ ಚಿರತೆಗಳ ಪೈಕಿ ಒಂದು ಕೊನೆಗೂ ಬೋನಿನೊಳಗೆ ಸಿಲುಕಿ ಬಿದ್ದಿರುವುದು ಜನರ ಭೀತಿಯನ್ನು ಅಲ್ಪ ಶಮನಗೊಳಿಸಿದೆ. ಆದರೆ ರಾಜಪುರಂ, ಪನಯಾಲ್, ಅಂಬಲತ್ತರ ಹಾಗೂ ಇತರ ಹಲವೆಡೆಗಳಲ್ಲಿ ಚಿರತೆಗಳು ಇತ್ತೀಚೆಗಿನಿಂದ ಪದೇ ಪದೇ ಪ್ರತ್ಯಕ್ಷಗೊಳ್ಳತೊಡಗಿದೆ.

Leave a Reply

Your email address will not be published. Required fields are marked *

You cannot copy content of this page