ಕ್ಷೇತ್ರದಿಂದ ಚಿನ್ನಾಭರಣ ಕಳವುಗೈದು ಪರಾರಿಯಾದ ಸಹಾಯಕ ಅರ್ಚಕ ಸೆರೆ

ಆಲಪ್ಪುಳ: ಕ್ಷೇತ್ರದಲ್ಲಿ ದೇವರ ವಿಗ್ರಹಕ್ಕೆ ತೊಡಿಸಿದ್ದ 20 ಪವನ್ ಚಿನ್ನಾಭರಣಗಳನ್ನು ಕಳವುಗೈದು ಪರಾರಿಯಾಗಿದ್ದ ಸಹಾಯಕ ಅರ್ಚಕ ಸೆರೆಗೀಡಾಗಿದ್ದಾನೆ. ಕೊಲ್ಲಂ ನಿವಾಸಿ ರಾಮಚಂದ್ರನ್ ಪೋಟಿ ಎಂಬಾತ ಸೆರೆಗೀಡಾದ ಆರೋಪಿಯಾಗಿದ್ದಾನೆ. ಈತ ಎಳುಪುನ್ನ ದಿ| ನಾರಾಯಣಪುರಂ ಮಹಾವಿಷ್ಣು ಕ್ಷೇತ್ರದಲ್ಲಿ ಸಹಾಯಕ ಅರ್ಚಕನಾಗಿದ್ದನು. ವಿಷು ದಿನದಂದು ಮುಖ್ಯ ಅರ್ಚಕ ರಜೆಯಲ್ಲಿ ತೆರಳಿದುದರಿಂದ ರಾಮಚಂದ್ರನ್ ಪೂಜೆಯ ಹೊಣೆಗಾರಿಕೆ ವಹಿಸಿಕೊಂಡಿದ್ದನು. ಈ ವೇಳೆ ದೇವರ ವಿಗ್ರಹದಲ್ಲಿದ್ದ 10 ಪವನ್‌ನ ಮಾಲೆ, ಮೂರೂವರೆ  ಪವನ್‌ನ ಕಿರೀಟ, 2 ನೆಕ್ಲೇಸ್ ಮೊದಲಾದವುಗಳನ್ನು  ಈತ ಕಳವು ನಡೆಸಿ ಪರಾರಿಯಾಗಿದ್ದನು. ಪೊಲೀಸರು ಮೊಬೈಲ್ ಫೋನ್ ಲೊಕೇಶನ್ ಕೇಂದ್ರೀಕರಿಸಿ ನಡೆಸಿದ ಕಾರ್ಯಾಚರಣೆಯಲ್ಲಿ ಆರೋಪಿಯನ್ನು ಬಂಧಿಸಲಾಗಿದೆ. ಕಳವುಗೈದ ಚಿನ್ನಾಭರಣಗಳನ್ನು  ಆರೋಪಿಸಿ ಎರ್ನಾಕುಳಂನ ಬ್ಯಾಂಕ್‌ನಲ್ಲಿ ಅಡವಿರಿಸಿದ್ದಾ ನೆನ್ನಲಾಗಿದೆ.

Leave a Reply

Your email address will not be published. Required fields are marked *

You cannot copy content of this page