ಗಲ್ಫ್ ಉದ್ಯಮಿ ಕೊಲೆ : ನಾಲ್ಕನೇ ಆರೋಪಿಗೆ ಶರತ್ತುಬದ್ಧ ಜಾಮೀನು ಮಂಜೂರು


ಕಾಸರಗೋಡು: ಪಳ್ಳಿಕ್ಕೆರೆ ಪೂಚಕ್ಕಾಡ್ ಫಾರೂಕಿ ಮಸೀದಿ ಬಳಿಯ ಬೈತುಲ್ ಮಂಜಿಲ್ನ ಗಲ್ಫ್ ಉದ್ಯಮಿ ಸಿ.ಎಂ. ಅಬ್ದುಲ್ ಗಫೂರ್ ಹಾಜಿ (55) ಕೊಲೆ ಪ್ರಕರಣಕ್ಕೆ ಸಂಬAಧಿಸಿ ಬಂಧನಕ್ಕೊಳಗಾಗಿ ನ್ಯಾಯಾಂಗ ಬಂಧನದಲ್ಲಿರುವ ನಾಲ್ವರು ಆರೋಪಿಗಳ ಪೈಕಿ ನಾಲ್ಕನೇ ಆರೋಪಿ ಮಧೂರು ಕೊಲ್ಯ ನವಾಸಿ ಆಯಿಷಾ (43)ಳಿಗೆ ಕಾಸರಗೋಡು ಜಿಲ್ಲಾ ಸೆಶನ್ಸ್ ನ್ಯಾಯಾಲಯ ಶರತ್ತುಬದ್ದ ಜಾಮೀನು ಮಂದೂರು ಮಾಡಿದೆ.
ಒಂದು ಲಕ್ಷ ರೂ. ಮುಚ್ಚಳಿಕೆ ಹಾಗೂ ಅದೇ ಮೊತ್ತದ ಇಬ್ಬರು ವ್ಯಕ್ತಿಗಳು ಮುಚ್ಚಳಿಕೆಯಲ್ಲಿ ಜಾಮೀನು ಮಂಜೂರು ಮಾಡಲಾಗಿದೆ. ತನಿಖೆ ಯೊಂದಿಗೆ ಸಹಕರಿಸಬೇಕು, ಸಾಕ್ಷಿ ದಾರರಿಗೆ ಬೆದರಿಕೆಯೊಡ್ಡುವುದಾಗಲೀ, ಅವರಿಗೆ ಯಾವುದೇ ರೀತಿಯ ಆಮಿಷವನ್ನು ಒಡ್ಡಬಾರದು, ಹಾಗೆ ನಡೆದಲ್ಲಿ ಜಾಮೀನು ರದ್ದುಪಡಿಸಲಾಗು ವುದೆಂಬ ನಿಬಂಧನೆಯನ್ನು ಜಾಮೀನಿ ನಲ್ಲಿ ಹೇರಲಾಗಿದೆ. ಮಾತ್ರವಲ್ಲ ಜಾಮೀನು ಪಡೆದ ಬಳಿಕ ಯಾವುದೇ ರೀತಿಯ ಅಪರಾಧ ಕೃತ್ಯಗಳಲ್ಲಿ ತೊಡಗಬಾರದು. ಜಾಮೀನಿನಲ್ಲಿ ಬಿಡುಗಡೆಗೊಂಡ ಮೂರು ದಿನಗಳೊಳಗಾಗಿ ಪಾಸ್ಪೋರ್ಟ್ನ್ನು ನ್ಯಾಯಾಲಯಕ್ಕೆ ಸಮರ್ಪಿಸಬೇಕು. ಆ ವಿಷಯದಲ್ಲಿ ಅಫಿದಾವಿತ್ ನೀq ಬೇಕೆಂಬ ನಿಬಂಧನೆಯನ್ನೂ ಹೇರಲಾಗಿದೆ. ಅಬ್ದುಲ್ ಗಫೂರ್ ಹಾಜಿ ಕೊಲೆ ಪ್ರಕರಣದಲ್ಲಿ ಆರೋಪಿ ಆಯಿಶಾ ನೇರವಾಗಿ ಭಾಗಿಯಾಗಿಲ್ಲ ವೆಂದೂ ಈ ಕೊಲೆ ಪ್ರಕರಣದ ಇತರ ಆರೋಪಿಗಳಾದ ಉದುಮ ಬಾರಾ ಮೀತಲ್ ಮಾಂuಟಿಜeಜಿiಟಿeಜಡ್ ಕುಳಕುನ್ನಿನಲ್ಲಿ ಈಗ ವಾಸಿಸುತ್ತಿರುವ ಮೂಲತಃ ಮಧೂರು ಉಳಿಯತ್ತಡ್ಕ ನೇಶನಲ್ ನಗರ ತುರ್ತಿ ನಿವಾಸಿ ಟಿ.ಎಂ. ಉಬೈಸ್ (ಉಮೈಸ್ 32), ಆತನ ಪತ್ನಿ ಮಂತ್ರವಾದಿನಿ ಶಮೀಮ ಕೆ.ಎಚ್ (35) ಮತ್ತು ಪೂಚಕ್ಕಾಡು ದೊಡ್ಡ ಮಸೀದಿಗೆ ಸಮೀಪದ ಪಿ.ಎಂ. ಅನ್ಸೀಫಾ (36) ಎಂಬವರು ಅಬ್ದುಲ್ ಗಫೂರ್ ಹಾಜಿಯಿಂದ ಮಂತ್ರವಾದದ ಹೆಸರಲ್ಲಿ ಪಡೆದ 596 ಪವನ್ (4.76 ಕಿಲೋ) ಚಿನ್ನವನ್ನು ಮಾರಾಟ ಮಾಡಲು ಸಹಾಯ ಮಾಡಿದ ಆರೋಪವನ್ನು ಮಾತ್ರವೇ ನಾಲ್ಕನೇ ಆರೋಪಿ ಆಯಿಷಾಳ ವಿರುದ್ದ ಹೊರಿಸಿ ಪೊಲೀಸರು ನ್ಯಾಯಾಲಯಕ್ಕೆ ತನಿಖಾ ವರದಿ ಸಲ್ಲಿಸಿದ್ದರು. ಇದನ್ನೆಲ್ಲಾ ಪರಿಗಣಿಸಿ ನ್ಯಾಯಾಲಯ ಆಕೆಗೆ ಜಾಮೀನು ಮಂಜೂರು ಮಾಡಿದೆ.
ಇತರ ಮೂವರು ಆರೋಪಿಗಳು ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿಗಳನ್ನು ನ್ಯಾಯಾಲಯ ತಳ್ಳಿಹಾಕಿ ಅವರಿಗೆ ಜಾಮೀನು ನಿರಾಕರಿಸಿದೆ.
ಈ ಕೊಲೆ ಪ್ರಕರಣದಲ್ಲಿ ಇನ್ನೂ ಇಬ್ಬರು ಶಾಮೀಲಾಗಿರುವುದಾಗಿ ಪೊಲೀಸ್ ತನಿಖೆಯಲ್ಲಿ ಪತ್ತೆಹಚ್ಚಲಾಗಿದ್ದು, ಆ ಇಬ್ಬರು ಈಗ ವಿದೇಶದಲ್ಲಿದ್ದಾರೆ. ಅವರನ್ನು ಬಂಧಿಸುವ ಪ್ರಯತ್ನದಲ್ಲಿ ಪೊಲೀಸರು ತೊಡಗಿದ್ದಾರೆ.
2023 ಎಪ್ರಿಲ್ 14ರಂದು ಅಬ್ದುಲ್ ಗಫೂರ್ ಹಾಜಿಯನ್ನು ಮನೆ ಯೊಳಗೆ ಕೊಲೆಗೈಯ್ಯಲಾಗಿತ್ತು. ಮಂತ್ರವಾದದ ಹೆಸರಲ್ಲಿ ಆ ಮೂವರು ಆರೋಪಿಗಳು ಅವರಿಂದ ಚಿನ್ನ ಪಡೆದುಕೊಂಡಿದ್ದರೆAದೂ ಅದನ್ನು ಹಿಂತಿರುಗಿಸುವAತೆ ಹಾಜಿಯವರು ನಂತರ ಆರೋಪಿಗಳಲ್ಲಿ ತಿಳಿಸಿದ್ದರು. ಅದರ ಹೆಸರಲ್ಲಿ ಹಾಜಿಯನ್ನು ಆರೋಪಿಗಳು ಕೊಲೆಗೈದಿದ್ದರೆಂದು ಪೊಲೀಸರು ನಡೆಸಿದ ತನಿಖಾ ವರದಿಯಲ್ಲಿ ಆರೋಪಿಸಲಾಗಿದೆ. ಕಾಸರಗೋಡು ಡಿಸಿಆರ್ಬಿ ಡಿವೈಎಸ್ಪಿ ಕೆ.ಜೆ. ಜೋನ್ಸನ್ ನೇತೃತ್ವದ ವಿಶೇಷ ಪೊಲೀಸರ ತಂಡ ಈ ಕೊಲೆಪ್ರಕರಣದ ತನಿಖೆ ನಡೆಸುತ್ತಿದೆ.
ಮಂತ್ರವಾದದ ಹೆಸರಲ್ಲಿ ಆರೋಪಿಗಳು ಪಡೆದ 576 ಪವನ್ನ ಚಿನ್ನದಲ್ಲಿ 172 ಪವನ್ ಚಿನ್ನವನ್ನು ಮಾತ್ರವೇ ಪೊಲೀಸರಿಗೆ ಈತನಕ ಪತ್ತೆಹಚ್ಚಲು ಸಾಧ್ಯವಾಗಿದೆ. ಬಾಕಿ ಚಿನ್ನದ ಪತ್ತೆಗಾಗಿರುವ ಶೋಧ ಕಾರ್ಯಾಚರಣೆಯಲ್ಲಿ ಪೊಲೀಸರು ಇನ್ನೂ ಮುಂದಾಗಿದ್ದಾರೆ.

Leave a Reply

Your email address will not be published. Required fields are marked *

You cannot copy content of this page