ನಾಲ್ಕೂವರೆ ಲೀಟರ್ ಬಿಯರ್ ವಶ: ಓರ್ವ ಸೆರೆ
ಬದಿಯಡ್ಕ: ನಾಲ್ಕೂವರೆ ಲೀಟರ್ ಕೇರಳ ನಿರ್ಮಿತ ಬಿಯರ್ ಕೈವಶವಿರಿಸಿಕೊಂಡಿದ್ದ ಬದಿಯಡ್ಕ ಎಡಕ್ಕಾನ ಚೀಮುಳ್ಳು ಎಂಬಲ್ಲಿನ ವಿ. ರಾಜೇಶ್ನನ್ನು ಅಬಕಾರಿ ತಂಡ ಬಂಧಿಸಿದೆ. ನಿಗದಿತ ಪ್ರಮಾಣಕ್ಕಿಂತ ಹೆಚ್ಚು ಬಿಯರ್ ಕೈವಶವಿರಿಸಿಕೊಂಡ ಆರೋಪದಂತೆ ಬಂಧಿಸಿ ಕೇಸು ದಾಖಲಿಸಲಾಗಿದೆ. ಕುಂಬಳೆ ಅಬಕಾರಿ ಪ್ರಿವೆಂಟೀವ್ ಆಫೀಸರ್ ಕೆ.ವಿ. ಮನಾಸ್, ಸಿಇಒಗಳಾದ ಅಖಿಲೇಶ್ ಎಂ.ಎಂ, ಎಂ. ಧನೇಶ್ ಎಂಬಿವರು ಕಾರ್ಯಾಚರಣೆ ನಡೆಸಿದ್ದಾರೆ.