ನಿಧನ
ಮೀಂಜ: ಕುಳೂರು ಚಿನಾಲ ನಿವಾ ಸಿ ರಾಮಪ್ಪ ಪೂಜಾರಿರವರ ಪತ್ನಿ ದೇವಕಿ (63) ನಿಧನರಾದರು. ದಿನೇಶ್ ಬೀಡಿ ಕಾರ್ಮಿಕೆಯಾಗಿದ್ದರು. ಮೃತರು ಪತಿ, ಮಕ್ಕಳಾದ ಹರೀಶ್, ಸತೀಶ, ಚಿತ್ರ, ಸವಿತ, ಉದಯ, ನವೀನ, ಚಂದ್ರಹಾಸ, ಸೊಸೆಯಂದಿರಾದ ಪುಷ್ಪ, ಜ್ಯೋತಿ, ಪ್ರಿಯ, ಅಳಿಯಂದಿರಾದ ರಾಕೇಶ್ ಮುಡಿಮಾರ್, ಹರೀಶ್ ಕುಂಬಳೆ, ಸಹೋದರರಾದ ಗೋಪಾಲ, ವಿಶ್ವ ನಾಥ, ಚಂದ್ರ, ನಾರಾಯಣ ಹಾಗೂ ಅಪಾರ ಬಂಧು ಬಳಗವನ್ನು ಅಗಲಿ ದ್ದಾರೆ. ಮನೆಗೆ ಸಿಪಿಎಂ ನೇತಾರರಾದ ವಿ.ವಿ ರಮೇಶ್, ಕೆ.ಆರ್. ಜಯಾನಂದ ಮೊದಲಾದವರು ಭೇಟಿ ನೀಡಿ ಅಂತಿಮನಮನ ಸಲ್ಲಿಸಿದ್ದಾರೆ. ನಿಧನಕ್ಕೆ ಕುಳೂರು ಚಿನಾಲದ ನವ ಯುವಕ ಕಲಾವೃಂದ, ನವ ಯುವಕ ಗ್ರಂಥಾಲಯ, ಮಂಜೇಶ್ವರ ತಾಲೂಕು ಲೈಬ್ರೆರಿ ಕೌನ್ಸಿಲ್, ಸಿಪಿಎಂ ಮೀಂಜ ಲೋಕಲ್ ಕಮಿಟಿ, ಡಿ.ವೈ.ಎಫ್.ಐ ಮಂಜೇಶ್ವರ ಬ್ಲೋಕ್ ಕಮಿಟಿ ಸಂತಾಪ ಸೂಚಿಸಿದೆ.