ಪತ್ರಿಕೆ ಓದುತ್ತಿದ್ದ ವೇಳೆ ಕುಸಿದು ಬಿದ್ದು ಯುವತಿ ಮೃತ್ಯು
ಮುಳ್ಳೇರಿಯ: ನಿನ್ನೆ ಬೆಳಿಗ್ಗೆ ಚಹಾ ಕುಡಿದ ಬಳಿಕ ಪತ್ರಿಕೆ ಓದುತ್ತಿದ್ದ ವೇಳೆ ಯುವತಿ ಕುಸಿದು ಬಿದ್ದು ಮೃತಪಟ್ಟರು. ಕಾರಡ್ಕ ಶಾಂತಿನಗರ ನಂದನ ನಿವಾಸಿ ಚಂದ್ರನ್ರ ಪತ್ನಿ ಪೂರ್ಣಿಮ (34) ಮೃತಪಟ್ಟವರು.
ಕುಸಿದು ಬಿದ್ದ ಕೂಡಲೇ ಇವರನ್ನು ಮುಳ್ಳೇರಿಯದ ಆಸ್ಪತ್ರೆಗೆ ಕೊಂಡೊಯ್ಯಲಾಯಿತಾದರೂ ಆ ವೇಳೆಗೆ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ. ಬಳಿಕ ಕಾಸರಗೋಡು ಜನರಲ್ ಆಸ್ಪತ್ರೆಗೆ ಮೃತದೇಹವನ್ನು ತಲುಪಿಸಲಾಗಿದ್ದು, ಇಂದು ಬೆಳಿಗ್ಗೆ ಅಂತ್ಯ ಸಂಸ್ಕಾರ ನಡೆಸಲಾಗಿದೆ. ಮೃತ ಯುವತಿ ದಿ| ಮಾಧವನ್ ನಾಯರ್ ಹಾಗೂ ಸರೋಜಿನಿ ದಂಪತಿ ಪುತ್ರಿಯಾಗಿದ್ದು, ಪತಿ, ಪುತ್ರ ಸಾಯಂತ್ ಕೃಷ್ಣ, ಸಹೋದರರಾದ ವಿನೋದ್ ಕುಮಾರ್, ಮಣಿಕಂಠನ್, ಸಹೋದರಿ ಪುಷ್ಪಲತಾ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.