ಪತ್ರ ಬರೆದಿಟ್ಟು ಪತಿ ಯುವತಿಯೊಂದಿಗೆ ಪರಾರಿ: ಪತ್ನಿ ದೂರು

ಕಾಸರಗೋಡು:  ಪತ್ನಿಗೆ ಪತ್ರ ಬರೆದಿಟ್ಟ ಬಳಿಕ ಪತಿ ಯುವತಿಯೊಂದಿಗೆ ಪರಾರಿಯಾಗಿರುವುದಾಗಿ ದೂರಲಾಗಿದೆ. ಪೆರಿಯ ಸರಕಾರಿ ಹೈಯರ್ ಸೆಕೆಂಡರಿ ಶಾಲೆ ಸಮೀಪದಲ್ಲಿ ವಾಸಿಸುವ ಇಡುಕ್ಕಿ ಕಟ್ಟಪ್ಪನ ಕೊಚ್ಚು ವೀಟಿಲ್ ಎಸ್. ಸರಸ್ವತಿ (32)ರ ದೂರಿನಂತೆ  ಬೇಕಲ ಪೊಲೀಸರು ಕೇಸು ದಾಖಲಿಸಿದ್ದಾರೆ.  ಈ ತಿಂಗಳ 3ರಂದು ಮುಂಜಾನೆ 2.30ರಿಂದ 5ರಂದು ಬೆಳಿಗ್ಗೆ 9.30ರ ಮಧ್ಯೆಗಿನ ಸಮಯದಲ್ಲಿ ಪತಿ ಕುಮಾರವೇಲ್ (38) ನಾಪತ್ತೆಯಾಗಿರುವುದಾಗಿ ಸರಸ್ವತಿ ದೂರಿದ್ದಾರೆ. ಕಟ್ಟಪ್ಪನದಲ್ಲಿರುವ ಮನೆ ಬಳಿಯಲ್ಲಿರುವ ಸ್ನೇಹ ಎಂಬ ಯುವತಿಯ ಜೊತೆಗೆ ತೆರಳಿರುವುದಾಗಿ ಶಂಕಿಸುತ್ತಿರುವುದಾಗಿಯೂ ಪತ್ನಿ ದೂರಿನಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

You cannot copy content of this page