ಪತ್ರ ಬರೆದಿಟ್ಟು ಪತಿ ಯುವತಿಯೊಂದಿಗೆ ಪರಾರಿ: ಪತ್ನಿ ದೂರು
ಕಾಸರಗೋಡು: ಪತ್ನಿಗೆ ಪತ್ರ ಬರೆದಿಟ್ಟ ಬಳಿಕ ಪತಿ ಯುವತಿಯೊಂದಿಗೆ ಪರಾರಿಯಾಗಿರುವುದಾಗಿ ದೂರಲಾಗಿದೆ. ಪೆರಿಯ ಸರಕಾರಿ ಹೈಯರ್ ಸೆಕೆಂಡರಿ ಶಾಲೆ ಸಮೀಪದಲ್ಲಿ ವಾಸಿಸುವ ಇಡುಕ್ಕಿ ಕಟ್ಟಪ್ಪನ ಕೊಚ್ಚು ವೀಟಿಲ್ ಎಸ್. ಸರಸ್ವತಿ (32)ರ ದೂರಿನಂತೆ ಬೇಕಲ ಪೊಲೀಸರು ಕೇಸು ದಾಖಲಿಸಿದ್ದಾರೆ. ಈ ತಿಂಗಳ 3ರಂದು ಮುಂಜಾನೆ 2.30ರಿಂದ 5ರಂದು ಬೆಳಿಗ್ಗೆ 9.30ರ ಮಧ್ಯೆಗಿನ ಸಮಯದಲ್ಲಿ ಪತಿ ಕುಮಾರವೇಲ್ (38) ನಾಪತ್ತೆಯಾಗಿರುವುದಾಗಿ ಸರಸ್ವತಿ ದೂರಿದ್ದಾರೆ. ಕಟ್ಟಪ್ಪನದಲ್ಲಿರುವ ಮನೆ ಬಳಿಯಲ್ಲಿರುವ ಸ್ನೇಹ ಎಂಬ ಯುವತಿಯ ಜೊತೆಗೆ ತೆರಳಿರುವುದಾಗಿ ಶಂಕಿಸುತ್ತಿರುವುದಾಗಿಯೂ ಪತ್ನಿ ದೂರಿನಲ್ಲಿ ತಿಳಿಸಿದ್ದಾರೆ.