ಪೈವಳಿಕೆಯಲ್ಲಿ ಕೊಡಿಯೇರಿ ಬಾಲಕೃಷ್ಣನ್ ಸಂಸ್ಮರಣೆ

ಪೈವಳಿಕೆ; ಸಿಪಿಎಂ ರಾಜ್ಯ ಕಾರ್ಯದರ್ಶಿಯಾಗಿದ್ದ ಕೊಡಿಯೇರಿ ಬಾಲಕೃಷ್ಣನ್‌ರ ಪ್ರಥಮ ವಾರ್ಷಿಕ ಸಂಸ್ಮರಣೆ ಸಿಪಿಎಂ ಪೈವಳಿಕೆ ಲೋಕಲ್ ಸಮಿತಿ ನೇತೃತ್ವದ್ಲಲಿ ನಡೆಸಲಾಯಿತು. ಸಿಪಿಎಂ ನೇತಾರ ಶ್ರೀನಿವಾಸ ಭಂಡಾರಿ ಧ್ವಜಾರೋಹಣಗೈದರು. ನಾರಾಯಣ ಶೆಟ್ಟಿ ಅಧ್ಯಕ್ಷತೆ ವಹಿಸಿದರು. ಸಿಪಿಎಂ ನೇತಾರರಾದ ಅಹಮ್ಮದ್ ಹುಸೈನ್ ಪಿ.ಕೆ., ಚಂದ್ರ ನಾಕ್ ಮಾನಿಪ್ಪಾಡಿ ಮಾತನಾಡಿದರು. ಲೋಕಲ್ ಕಾರ್ಯದರ್ಶಿ ಅಬ್ದುಲ್ಲ ಕೆ. ಸ್ವಾಗತಿಸಿ, ಸದಾನಂದ ಕೋರಿಕ್ಕಾರ್ ವಂದಿಸಿದರು.  ಸಿಪಿಎಂ ಮಾನಿಪ್ಪಾಡಿ ಶಾಖೆ ಸಮಿತಿ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪೈವಳಿಕೆ ಲೋಕಲ್ ಸಮಿತಿ ಸದಸ್ಯ ಚಂದ್ರ ನಾಕ್ ಮಾನಿಪ್ಪಾಡಿ ಧ್ವಜಾರೋಹಣಗೈದರು. ಮಾಧವ ಎಂ. ಅಧ್ಯಕ್ಷತೆ ವಹಿಸಿದರು. ರಾಮ ಗೌಡ, ಮನೋಜ್, ಪ್ರಜ್ವಲ್ ಕುಮಾರ್, ತೇಜಸ್ಸ್ ನೇತೃತ್ವ ನೀಡಿದರು. ಮನೋಜ್ ಸ್ವಾಗತಿಸಿ,  ಮನೋಜ್ ವಂದಿಸಿದರು.

You cannot copy contents of this page