ಪ್ರಯಾಣಿಕರನ್ನು ದಾರಿ ತಪ್ಪಿಸುತ್ತಿರುವ  ಸೂಚನಾ ಫಲಕ: ಕುಂಬಳೆಗೆ ತಲುಪಿದಾಗ ಗೊಂದಲ

ಕುಂಬಳೆ: ಪ್ರಯಾಣಿಕರಿಗೆ ಸಹಾಯವಾಗಲೆಂದು ಸ್ಥಾಪಿಸಿದ ದಾರಿಸೂಚನಾ ಫಲಕಗಳು ಜನರನ್ನು ದಾರಿ ತಪ್ಪಿಸುತ್ತಿವೆ.

ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ನಡೆಯುವ ಕುಂಬಳೆ ಪೇಟೆಯಲ್ಲಿ ಸ್ಥಾಪಿಸಿರುವ ದಾರಿ ಸೂಚನಾ ಫಲಕದಿಂದ ಇಂತಹವೊಂದು  ಗೊಂದಲ  ಎದುರಾಗುತ್ತಿದೆ.   ರಸ್ತೆ ನಿರ್ಮಾಣ ಕಂಪೆನಿಯಾದ ಊರಾಲುಂಗಲ್ ಸೊಸೈಟಿ ಅಧಿಕಾರಿಗಳು ಫಲಕ ಸ್ಥಾಪಿಸಿದ್ದಾರೆ. ಕಾಸರಗೋಡು-ಮಂಗಳೂರು ರಸ್ತೆಯ ಕುಂಬಳೆಯಲ್ಲಿ ಸ್ಥಾಪಿಸಿರುವ ಫಲಕದಲ್ಲಿ ಸೀತಾಂಗೋಳಿ ಬಾಗಕ್ಕೆ ತೆರಳುವಂತೆ ಸೂಚಿಸಿದ ಭಾಗದಲ್ಲಿ ರಸ್ತೆಯೇ ಇಲ್ಲ. ಅದೇ ರೀತಿ ಮಂಗ ಳೂರು ಭಾಗಕ್ಕೆ ದಾರಿ ಸೂಚಿಸುತ್ತಿರು ವುದು ಕಾಸರಗೋಡಿನತ್ತಾಗಿದೆ. ಮಂಗಳೂರು ಭಾಗದಿಂದ  ಬರುವ ವಾಹನ ಪ್ರಯಾಣಿಕರಿಗಾಗಿ ಈ ಫಲಕ ಸ್ಥಾಪಿಸಲಾಗಿದೆ ಎನ್ನಲಾಗುತ್ತಿದೆ. ಆದರೆ ಈ ಸ್ಥಳ ನಾಮಫಲಕ ನೋಡಿ ಸಂಚರಿಸಿದರೆ ಎಲ್ಲೆಲ್ಲಿಗೋ ಹೋಗಿ ತಲುಪುವ ಸ್ಥಿತಿ ಉಂಟಾಗಿದೆ ಯೆಂದು ಪ್ರಯಾಣಿಕರು ತಿಳಿಸುತ್ತಿದ್ದಾರೆ. ಈ ಸ್ಥಳ ನಾಮಫಲಕವನ್ನು ಶೀಘ್ರ ಸರಿಯಾದ ರೀತಿಯಲ್ಲಿ ಸ್ಥಾಪಿಸುವಂತೆ ಕಂಪೆನಿ ಅಧಿಕಾರಿಗಳಲ್ಲಿ ಸ್ಥಳೀಯರು ಆಗ್ರಹಪಟ್ಟಿದ್ದಾರೆ.

Leave a Reply

Your email address will not be published. Required fields are marked *

You cannot copy content of this page