ಬಾಯಾರು ಆಶಿಫ್ ಸಾವಿನ ಬಗ್ಗೆ ತನಿಖೆ ಬುಡಮೇಲು ಷಡ್ಯಂತ್ರ- ಕಾಂಗ್ರೆಸ್ ಆರೋಪ

ಪೈವಳಿಕೆ: ಬಾಯಾರು ಗಾಳಿಯಡ್ಕದ ಮೊಹಮ್ಮದ್ ಆಶಿಫ್ ಕಳೆದ ಜನವರಿ ೧೫ರಂದು ಅನುಮಾನಾ ಸ್ಪದ ರೀತಿಯಲ್ಲಿ ಮೃತಪಟ್ಟ ಬಗ್ಗೆ ಜಿಲ್ಲಾ ಕ್ರೈಮ್ ಬ್ರಾಂಚ್ ನಡೆಸುತ್ತಿರುವ ತನಿಖೆಯನ್ನು ಬುಡಮೇಲುಗೊಳಿಸಲು ಕೆಲವು ಶಕ್ತಿಗಳು ಷಡ್ಯಂತ್ರ ನಡೆಸುತ್ತಿವೆ ಎಂದು ಪೈವಳಿಕೆ ಮಂಡಲ ಕಾಂಗ್ರೆಸ್ ಸಮಿತಿ ಆರೋಪಿಸಿದೆ. ಕಳೆದ ಮೂರೂ ವರೆ ತಿಂಗಳಿಂದ ತನಿಖೆ ನಡೆಸುತ್ತಿರುವ ಕ್ರೈಮ್‌ಬ್ರಾಂಚ್ ಅಧಿಕಾರಿಗಳಿಗೆ ಈ ವರೆಗೆ ಸಾವಿಗೆ ಕಾರಣ ದೃಢೀಕರಿಸಲು ಸಾಧ್ಯವಾಗದಿರುವುದು ಖಂಡನೀ ಯವೆಂದು ಸಭೆ ಅಭಿಪ್ರಾಯ ಪಟ್ಟಿದೆ. ಆಶಿಫ್‌ನ ಕುಟುಂಬಕ್ಕೆ ಸರಕಾರ ಕೂಡಲೇ ಆರ್ಥಿಕ ಸಹಾಯ ಒದಗಿಸುವಂತೆ  ಸಭೆಯಲ್ಲಿ ಆಗ್ರಹಿಸಲಾಯಿತು. ಮಂಡಲ ಅಧ್ಯಕ್ಷ ವಸಂತ ಕುಮಾರ್ ಅಧ್ಯಕ್ಷತೆ ವಹಿಸಿದರು. ಬ್ಲೋಕ್ ಮಾಜಿ ಅಧ್ಯಕ್ಷ ಲಕ್ಷ್ಮಣ ಪ್ರಭು ಕುಂಬಳೆ ಉದ್ಘಾಟಿಸಿದರು. ಶಾಜಿ ಎನ್.ಸಿ., ಅಬ್ದುಲ್ಲ ಹಾಜಿ, ಸುಬ್ರಾಯ ಸಾಯ, ನೌಶಾದ್ ಕಯ್ಯಾರು, ಮೊಹಮ್ಮದಲಿ ಚೇವಾರು, ಉಂಬಾಯಿ ಕುಡಾಲು, ಮುಸ್ತಫ, ಎಡ್ವರ್ಡ್, ನವಾಜ್ ಕನಿಯಾಲ, ಅಬ್ದುಲ್ಲ ಕನಿಯಾಲ, ಮೊಯ್ದೀನ್ ಕುಂಞಿ, ಅಬ್ದುಲ್ ರಜಾಕ್, ಗಂಗಾಧರ ನಾಯ್ಕ್, ಶಿವರಾಮ ಶೆಟ್ಟಿ ಭಾಗವಹಿಸಿದರು.

Leave a Reply

Your email address will not be published. Required fields are marked *

You cannot copy content of this page