ಮುಳ್ಳೇರಿಯ: ಈ ತಿಂಗಳ ೯, ೧೦,೧೧ರಂದು ಪಾಲಕ್ಕಾಡ್ನಲ್ಲಿ ನಡೆಯಲಿರುವ ಬಿಎಂಎಸ್ ೨೦ನೇ ರಾಜ್ಯ ಸಮ್ಮೇಳನದ ಅಂಗವಾಗಿ ಮುಳ್ಳೇರಿಯ ವಲಯ ಸಮಿತಿಯ ನೇತೃತ್ವದಲ್ಲಿ ಮುಳ್ಳೇರಿಯ ಪೇಟೆಯಲ್ಲಿ ಡಂಗುರ ಜಾಥಾ ನಡೆಸಲಾಯಿತು. ಬಿಎಂಎಸ್ ಜಿಲ್ಲಾ ನೇತಾರರಾದ ಎಂ.ಕೆ. ರಾಘವನ್, ಗೀತಾ ಬಾಲಕೃಷ್ಣನ್, ಲೀಲಾ ಕೃಷ್ಣನ್, ವಲಯ ಅಧ್ಯಕ್ಷ ಆನಂದ ಸಿ.ಎಚ್, ಕಾರ್ಯದರ್ಶಿ ಭಾಸ್ಕರನ್, ವಲಯ ಪದಾಧಿಕಾರಿಗಳಾದ ಪುರುಷೋತ್ತಮ, ಸದಾಶಿವ, ವಿನೋದ್ ಸಿ.ಎಚ್, ಹರಿಪ್ರಸಾದ್, ದುರ್ಗಾ ಪ್ರಸಾದ್, ಶೋಭಾ ಭಾಸ್ಕರನ್, ರಾಮಕೃಷ್ಣನ್, ಕುಸುಮ ಮಣಿಯೂರು ಮೊದಲಾದವರು ನೇತೃತ್ವ ನೀಡಿದರು.
