ಬಿಜೆಪಿ ಜಿಲ್ಲಾ ಪದಾಧಿಕಾರಿಗಳ ಘೋಷಣೆ ಮಹಿಳೆಯರಿಗೂ ಹೆಚ್ಚಿನ ಪ್ರಾತಿನಿಧ್ಯ
ಕಾಸರಗೋಡು: ಬಿಜೆಪಿ ಕಾಸರಗೋಡು ಜಿಲ್ಲಾ ಸಮಿತಿಯ ನೂತನ ಪದಾಧಿಕಾರಿಗಳ ಘೋಷಿಸಲಾಗಿದೆ. ಪಕ್ಷದ ರಾಜ್ಯ ಅಧ್ಯಕ್ಷ ಈ ಘೋಷಣೆ ನಡೆಸಿದ್ದಾರೆ. ಇದರಂತೆ ಬಿಜೆಪಿ ಜಿಲ್ಲಾ ಸಮಿತಿಯ ನೂತನ ಪದಾಧಿಕಾರಿಗಳನ್ನಾಗಿ ಎಂ. ಜನನಿ, ಎ.ಕೆ. ಕಯ್ಯಾರ್, ಎಂ. ಬಲ್ರಾಜ್, ಮಣಿಕಂಠ ರೈ, ಮುರಳೀಧರ ಯಾದವ್, ಎಚ್.ಆರ್. ಸುಕನ್ಯ (ಉಪಾಧ್ಯ ಕ್ಷರು), ಪಿ.ಆರ್. ಸುನಿಲ್, ಎನ್. ಬಾಬುರಾಜ್, ಮನುಲಾಲ್ ಮೇಲತ್ತ್ (ಪ್ರಧಾನ ಕಾರ್ಯದರ್ಶಿ ಗಳು), ಎನ್. ಮಧು, ಸಂಜೀವ ಪುಳ್ಕೂರು, ಮಹೇಶ್ ಗೋಪಾಲ್, ಪ್ರಮೀಳಾ ಮಜಲ್, ಪುಷ್ಪಗೋ ಪಾಲನ್, ಅಶ್ವಿನಿ ಕೆ.ಎಂ (ಜಿಲ್ಲಾ ಕಾರ್ಯದರ್ಶಿಗಳು) ಹಾಗೂ ವೀಣಾ ಅರುಣ್ ಶೆಟ್ಟಿ (ಕೋಶಾ ಧಿಕಾರಿ)ಯಾಗಿ ನೇಮಿಸಲಾಗಿದೆ.