ಬಿಜೆಪಿ ಮಂಡಲ ಪಂಚಾಯತ್, ಏರಿಯಾ ಸಮಿತಿ ಪದಾಧಿಕಾರಿಗಳು
ಮಂಜೇಶ್ವರ: ಬಿಜೆಪಿ ಮಂಜೇಶ್ವರ ಮಂಡಲ ಪಂಚಾಯತ್, ಏರಿಯಾ ಸಮಿತಿ ಅಧ್ಯಕ್ಷರು, ಪ್ರಧಾನ ಕಾರ್ಯದರ್ಶಿಗಳನ್ನು ಮಂಡಲ ಅಧ್ಯಕ್ಷ ಆದರ್ಶ್ ಬಿ.ಎಂ ಘೋಷಿಸಿದರು. ಪೈವಳಿಕೆ ಉತ್ತರ ವಲಯ ಅಧ್ಯಕ್ಷರಾಗಿ ಸತ್ಯಶಂಕರ ಭಟ್, ಪ್ರಧಾನ ಕಾರ್ಯದರ್ಶಿಯಾಗಿ ಪ್ರವೀಣ್ ರೈ ಪಟ್ಲ, ದಕ್ಷಿಣ ವಲಯ ಅಧ್ಯಕ್ಷರಾಗಿ ಸುಬ್ರಹ್ಮಣ್ಯ ಭಟ್ ಆಟಿಕುಕ್ಕೆ, ಪ್ರಧಾನ ಕಾರ್ಯದರ್ಶಿಯಾಗಿ ಜಯಶಂಕರ್ ಮುನ್ನೂರು, ವರ್ಕಾಡಿ ಪಂಚಾಯತ್ ಸಮಿತಿ ಅಧ್ಯಕ್ಷರಾಗಿ ಭಾಸ್ಕರ್ ಪೊಯ್ಯೆ, ಪ್ರಧಾನ ಕಾರ್ಯದರ್ಶಿಯಾಗಿ ನಾಗೇಶ್ ಬಳ್ಳೂರು, ಮಂಜೇಶ್ವರ ವಿಭಾಗಾಧ್ಯಕ್ಷರಾಗಿ ಸತ್ಯದಾಸ್ ಎಂ.ವಿ, ಪ್ರಧಾನ ಕಾರ್ಯದರ್ಶಿಯಾಗಿ ಅವಿನಾಶ್ ಹೆಗ್ಡೆ ಆಯ್ಕೆಯಾದರು.