ಬೆಂಗಳೂರಿಗೆಂದು ಹೋದ ಯುವಕ ಕಾಶ್ಮೀರದ ಕಾಡಿನಲ್ಲಿ ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆ

ಪಾಲಕ್ಕಾಡ್: ಬೆಂಗಳೂರಿಗೆಂದು ತಿಳಿಸಿ ಮನೆಯಿಂದ ಹೋದ ಪಾಲಕ್ಕಾಡ್ ನಿವಾಸಿ ಯುವಕ ಜಮ್ಮು ಕಾಶ್ಮೀರದ ಪುಲ್ವಾಮದ ಅರಣ್ಯ ಪ್ರದೇಶದಲ್ಲಿ ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ. ಪಾಲಕ್ಕಾಡ್ ಕಾಂಞಿರಪುಳ ನಿವಾಸಿ ಮುಹಮ್ಮದ್ ಶಾನಿಬ್ (27) ಮೃತ ವ್ಯಕ್ತಿ. ಹತ್ತು ದಿನಗಳ ಹಿಂದೆಯೇ ಸಾವಿಗೀಡಾಗಿರ ಬಹದೆಂದು ಅಂದಾಜಿಸಲಾಗಿದೆ.  ಬೆಂಗಳೂರಿನ ಸೂಪರ್ ಮಾರ್ಕೆಟ್‌ನಲ್ಲಿ ಕೆಲಸ ಸಿಕ್ಕಿದೆಯೆಂದು ತಿಳಿಸಿ ಮುಹ ಮ್ಮದ್ ಶಾನಿಬ್ ಎಪ್ರಿಲ್ ೧೩ರಂದು ಮನೆಯಿಂದ ಹೋಗಿದ್ದಾರೆನ್ನಲಾಗಿದೆ. ಶಾನಿಬ್‌ರ ಸಹೋದರಿ ಶಿಫಾನ ಬೆಂಗಳೂರಿನಲ್ಲಿ ಅಕೌಂಟೆಂಟ್ ಆಗಿ ದ್ದಾರೆ. ಆದರೆ ಶಾನಿಬ್ ಅಲ್ಲಿಗೆ ತಲುಪಿ ರಲಿಲ್ಲ. ಈ ಮಧ್ಯೆ ಪುಲ್ವಾಮದಲ್ಲಿ ಪತ್ತೆಯಾದ ಮೃತದೇಹದಿಂದ ಲಭಿಸಿದ ಭಾವಚಿತ್ರ ಹಾಗೂ ವಿಳಾಸ ಪರಿಶೀಲಿ ಸಿದಾಗ ಮೃತ ವ್ಯಕ್ತಿಯ ಗುರುತು ಹಚ್ಚ ಲಾಗಿದೆ. ಅನಂತರ ತನ್ಮಾರ್ಗ್ ಪೊಲೀಸರು ಸಂಬಂಧಿಕರನ್ನು ಸಂಪರ್ಕಿಸಿ ವಿಷಯ ತಿಳಿಸಿದ್ದರು. ಪ್ರಾಣಿಗಳು ಆಕ್ರಮಿಸಿದ ಗಾಯಗಳು ಶಿನಿಬ್‌ರ ದೇಹದಲ್ಲಿದೆ ಯೆಂದು ಪೊಲೀಸರು ತಿಳಿಸಿದ್ದಾರೆ. ಇದೇ ವೇಳೆ ಶಾನಿಬ್ ಕಾಶ್ಮೀರಕ್ಕೆ ಯಾಕಾಗಿ ಹೋದರೆಂದು ಸ್ಪಷ್ಟಗೊಂಡಿಲ್ಲ.

Leave a Reply

Your email address will not be published. Required fields are marked *

You cannot copy content of this page