ಭಾರತದ ದಾಳಿಗೆ ಹೆದರಿ ಪಾಕ್ ಪ್ರಧಾನಿ, ಸೇನಾ ಮುಖ್ಯಸ್ಥ ನಾಪತ್ತೆ
ನವದೆಹಲಿ: ಜಮ್ಮು-ಕಾಶ್ಮೀರದ ಪಹಲ್ಗಾಮ್ನಲ್ಲಿ ನಡೆದ ಭಯೋ ತ್ಪಾದಕ ದಾಳಿಗೆ ಪ್ರತೀಕಾರವಾಗಿ ಭಾರತವು ಆರಂಭಿಸಿದ ಆಪರೇಶನ್ ಸಿಂಧೂರ್ ಕಾರ್ಯಾಚರಣೆ ಇನ್ನೂ ಮುಂದುವರಿಯುತ್ತಿರುವಂತೆಯೇ ಭಾರತದ ದಾಳಿಗೆ ಹೆದರಿದ ಪಾಕಿ ಸ್ತಾನ ಪ್ರಧಾನಮಂತ್ರಿ ಶೆಹಬಾಜ್ ಷರೀಫ್ ಮತ್ತು ಆ ದೇಶದ ಸೇನಾ ಮುಖ್ಯಸ್ಥ ಜನರಲ್ ಸಯಿದ್ ಆಸಿಮ್ ಮುನೀರ್ ಈಗ ದಿಢೀರ್ ಆಗಿ ನಾಪತ್ತೆಯಾಗಿದ್ದಾರೆ. ಪಾಕಿಸ್ತಾನದ ರಾಜಧಾನಿಯಾದ ಇಸ್ಲಾಮಾ ಬಾದ್ಗೆ ನೇರವಾಗಿ ನುಗ್ಗಿದ ಭಾರತದ ಯುದ್ಧ ವಿಮಾನಗಳು ಪ್ರಧಾನಿ ಶೆಹಬಾಜ್ ಷರೀಫ್ನ ಮನೆ ಬಳಿಯೇ ಕ್ಷಿಪಣಿ ದಾಳಿ ನಡೆಸಿದೆ. ಇವರ ಮನೆಯ ೨೦ ಕಿ.ಮೀ. ದೂರ ದಲ್ಲಿ ದಾಳಿ ನಡೆದಿದ್ದು, ಇದರಿಂದ ಹೆದರಿದ ಶೆಹಬಾಜ್ ಶೆರೀಫ್ ತಮ್ಮ ಜೀವ ಉಳಿಸಲು ತಕ್ಷಣ ಅಲ್ಲಿಂದ ಪರಾರಿಯಾಗಿದ್ದಾರೆ. ಅವರು ಈಗ ಪಾಕಿಸ್ತಾನದ ಯಾವುದೋ ಬಂಕರ್ನಲ್ಲಿ ಅಡಗಿಕೊಂಡಿದ್ದಾರೆನ್ನಲಾಗಿದೆ.
ಇದಾದ ಬೆನ್ನಲ್ಲೇ ಭಾರತದ ದಾಳಿಗೆ ಹೆದರಿದ ಪಾಕಿಸ್ತಾನದ ಸೇನಾ ಮುಖ್ಯಸ್ಥ ಜನರಲ್ ಸಯ್ಯಿದ್ ಅಸಿಮ್ ಮುನೀರ್ ಕೂಡಾ ನಾಪತ್ತೆ ಯಾಗಿರುವುದಾಗಿ ವರದಿಯಾಗಿದೆ.
ಇಂತಹ ಬೆಳವಣಿಗೆಯ ವೇಳೆಯಲ್ಲೇ ಜನರಲ್ ಅಸಿಮ್ ಮುನೀರ್ರನ್ನು ಪಾಕಿಸ್ತಾನದ ಸೇನಾ ಮುಖ್ಯಸ್ಥ ಹುದ್ದೆಯಿಂದ ಪಾಕ್ ಸರಕಾರ ಪದಚ್ಯುತಿ ಗೊಳಿಸಿ ಅವರನ್ನು ಬಂಧಿಸಿದೆ. ಆ ಬಳಿಕ ಅವರೂ ನಾಪತ್ತೆ ಯಾಗಿರುವುದಾಗಿ ವರದಿಗಳು ಹೇಳುತ್ತಿವೆ.
ಜಂಟಿ ಮುಖ್ಯಸ್ಥರ ಸಮಿತಿಯ ಪ್ರಸ್ತುತ ಅಧ್ಯಕ್ಷರಾಗಿರುವ ಜನರಲ್ ಸಾಹಿರ್ ಶಂಶಾದ್ ಮಿರ್ಜಾರನ್ನು ಪಾಕಿಸ್ತಾನ ಸೇನೆಯ ಮುಖ್ಯಸ್ಥರಾಗಿ ಅಧಿಕಾರ ವಹಿಸಿ ಕೊಂಡಿದ್ದಾರೆಂದು ಸಂಬಂಧಪಟ್ಟ ವರದಿಗಳು ಸೂಚಿಸುತ್ತಿವೆ. ವೈಯಕ್ತಿಕ ಮಹತ್ವಾಕಾಂಕ್ಷೆಗಳಿಗಾಗಿ ದೇಶವನ್ನು ಅವ್ಯವಸ್ಥೆ ಮತ್ತು ಕಾರ್ಯತಂತ್ರದ ಕುಪಿತಕ್ಕೆ ತಳ್ಳಿದ ಆರೋಪಗಳೂ ಇನ್ನೊಂದೆಡೆ ಜನರಲ್ ಮುನೀರ್ ರ ಮೇಲಿದೆ.