ಭಾರತ-ಪಾಕಿಸ್ತಾನ ಘರ್ಷಣೆ ಹಿನ್ನೆಲೆ: ಎಡರಂಗ ಸರಕಾರದ ವಾರ್ಷಿಕ ಕಾರ್ಯಕ್ರಮ ಮುಂದೂಡಿಕೆ
ತಿರುವನಂತಪುರ: ಭಾರತ-ಪಾಕಿ ಸ್ತಾನದ ನಡುವೆ ಮುಂದುವರಿಯುತ್ತಿರುವ ಘರ್ಷಣೆ ಹಿನ್ನೆಲೆಯಲ್ಲಿ ಎಡರಂಗ ಸರಕಾರದ 4ನೇ ವಾರ್ಷಿಕ ಕಾರ್ಯಕ್ರಮವನ್ನು ಮುಂದೂಡಲಾಗಿದೆ.
4ನೇ ವಾರ್ಷಿಕದಂಗವಾಗಿ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಆರಂಭಿಸಿರುವ ವಸ್ತು ಪ್ರದರ್ಶನ ಮಾತ್ರವೇ ನಿಗದಿತ ಸಮಯ ತನಕ ಮುಂದುವರಿಯಲಿದೆ. ವಾರ್ಷಿಕದಂಗವಾಗಿ ನಡೆಸಲು ತೀರ್ಮಾನಿಸಲಾಗಿರುವ ಎಲ್ಲಾ ಕಲಾ-ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ರದ್ದುಪಡಿಸಲಾಗಿದೆ. 6 ಜಿಲ್ಲೆಗಳಲ್ಲಿ ಇಂತಹ ಕಾರ್ಯಕ್ರಮಗಳನ್ನು ಈಗಾಗಲೇ ಮುಂದೂಡಲಾಗಿದೆ. ಆನ್ಲೈನ್ ಮೂಲಕ ನಡೆಸಲಾದ ಸಚಿವ ಸಂಪುಟ ಸಭೆಯ ಬಳಿಕ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಈ ವಿಷಯ ತಿಳಿಸಿದ್ದಾರೆ. ಮಾತ್ರವಲ್ಲದೆ ಎಡರಂಗ ಸರಕಾರದ ನಾಲ್ಕನೇ ವಾರ್ಷಿಕದಂಗವಾಗಿ ಎಡರಂಗ ನೇತೃತ್ವದಲ್ಲಿ ನಡೆಸಲು ತೀರ್ಮಾನಿಸಲಾ ಗಿರುವ ಎಲ್ಲಾ ರ್ಯಾಲಿಗಳನ್ನೂ ಮುಂ ದೂಡಲಾಗಿದೆ ಯೆಂದು ಇನ್ನೊಂದೆಡೆ ಎಡರಂಗ ರಾಜ್ಯ ಸಂಚಾಲಕ ಟಿ.ಪಿ. ರಾಮಕೃಷ್ಣನ್ ತಿಳಿಸಿದ್ದಾರೆ.