ಮಸೀದಿ ಸಮಿತಿಗೆ 1 ಕೋಟಿ ರೂ. ದೇಣಿಗೆ ನೀಡಿದ ವಿರೋಧ: ವೃದ್ಧನಿಗೆ ಆಕ್ರಮಣ; 6 ಮಂದಿ ವಿರುದ್ಧ ಕೇಸು

ಬೇಕಲ: ಈ ಹಿಂದಿನ ಮಸೀದಿ ಸಮಿತಿಗೆ 1 ಕೋಟಿ ರೂ. ದೇಣಿಗೆ ನೀಡಿದ ವಿರೋಧ ಕಾರಣವೆಂದು ಹೇಳಲಾಗುತ್ತಿದ್ದು, ವೃದ್ಧನನ್ನು ತಡೆದು ನಿಲ್ಲಿಸಿ ಇರಿದು ಗಾಯಗೊಳಿಸಲಾಗಿದೆ. ಉದುಮ ಪಾಕ್ಯಾರ್‌ನ ನಸೀರ್ ಮಂಜಿಲ್ ನಿವಾಸಿ ಕೆ.ಎಂ. ಅಬ್ದುಲ್ಲ ಹಾಜಿ (73)ಯವರಿಗೆ ಆಕ್ರಮಣ ನಡೆಸಲಾಗಿದೆ. ನಿನ್ನೆ ಮಸೀದಿಗೆ ತೆರಳುತ್ತಿದ್ದ ಮಧ್ಯೆ ಆಕ್ರಮಣವುಂಟಾಗಿದೆ. ತಡೆದು ನಿಲ್ಲಿಸಿ ಆಕ್ರಮಣ ನಡೆಸಿದಾಗ ಅವರ ರಕ್ತದೊತ್ತಡ ಹೆಚ್ಚಿ ನೆಲಕ್ಕೆ ಬಿದ್ದಿದ್ದು, ಈ ವೇಳೆ ಅಬ್ದುಲ್ಲ ಹಾಜಿಯ ಕಾಲಿಗೆ ಕತ್ತಿಯಿಂದ ಇರಿದು ಮುಖಕ್ಕೆ ಪಂಚ್‌ನಿಂದ ಗುದ್ದಿರುವುದಾಗಿ ಬೇಕಲ ಪೊಲೀಸ್ ನೋಂದಾಯಿಸಿದ ಕೇಸಿನಲ್ಲಿ ತಿಳಿಸಲಾಗಿದೆ. ಹಳೆಯ ಮಸೀದಿ ಸಮಿತಿ 1 ಕೋಟಿ ರೂ. ದೇಣಿಗೆ ನೀಡಿರುವುದು ಈಗಿನ ಸಮಿತಿಗೆ ಇಷ್ಟವಾಗಲಿಲ್ಲ. ಈ ವಿರೋಧದಿಂದ ಆಕ್ರಮಣ ನಡೆಸಿರುವುದೆಂದು ಅಬ್ದುಲ್ಲ ಹಾಜಿ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ಘಟನೆಯಲ್ಲಿ ಪಳ್ಳಂ ನಿವಾಸಿಗಳಾದ ಇಬ್ರಾಹಿಂ, ಮುನೀರ್, ರಜಾಕ್, ರಾಶಿದ್, ಪಾಕ್ಯಾರ್‌ನ ಆಮು ಹಾಜಿ, ಕುನ್ನಿಲ್‌ನ ರಶೀದ್ ಇಸ್ಮಾಯಿಲ್ ಎಂಬಿವರ ವಿರುದ್ಧ ಬೇಕಲ ಪೊಲೀಸರು ಕೇಸು ದಾಖಲಿಸಿದ್ದಾರೆ.

Leave a Reply

Your email address will not be published. Required fields are marked *

You cannot copy content of this page