ಮಾಜಿ ಪಂ. ಕಾರ್ಯದರ್ಶಿ ಸಿಪಿಎಂ ನೇತಾರ ನಿಧನ

ಮೀಂಜ: ಮೀಂಜ ಪಂಚಾ ಯತ್ ಮಾಜಿ ಕಾರ್ಯದರ್ಶಿ, ಸಿಪಿಎಂ ನೇತಾರ ಮಜಿಬೈಲ್‌ನ ಎಂ. ಜಗನ್ನಾಥ (73) ನಿಧನ ಹೊಂದಿದರು. ಅಸೌಖ್ಯ ಬಾಧಿಸಿ ದೇರಳಕಟ್ಟೆಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವೇಳೆ ನಿನ್ನೆ ಸಂಜೆ ನಿಧನ ಸಂಭವಿಸಿದೆ.

ಮೀಂಜ ಪಂಚಾಯತ್‌ನ ಮಾಜಿ ಸದಸ್ಯರಾಗಿದ್ದಾರೆ. ಮೀಂಜ, ಪೈವಳಿಕೆ ಪಂಚಾ ಯತ್‌ಗಳಲ್ಲಿ ಕಾರ್ಯ ದರ್ಶಿಯಾಗಿಯೂ ಸೇವೆ ಸಲ್ಲಿಸಿದ್ದರು.ಮಂಜೇಶ್ವರ ಪಂಚಾ ಯತ್ ಸ್ಪೆಷಲ್ ಗ್ರೇಡ್ ಸೆಕ್ರೆಟರಿ ಯಾಗಿ ಇವರು ಸೇವೆ ಯಿಂದ ನಿವೃತ್ತರಾಗಿದ್ದರು. ಅನಂತರ ಮೀಂಜ ಪಂಚಾ ಯತ್‌ನ ಕುಳೂರು ವಾರ್ಡ್ ನಿಂದ ಗೆಲುವು ಸಾಧಿಸಿ ಪಂಚಾ ಯತ್ ಸದಸ್ಯರಾಗಿದ್ದರು. ಮಂಗಲ್ಪಾಡಿ-ಪೈವಳಿಕೆ ಅರ್ಬನ್ ಕೋ-ಆಪರೇಟಿವ್ ಬ್ಯಾಂಕ್‌ನ ಡೈರೆಕ್ಟರ್ ಆಗಿಯೂ ಸೇವೆ ಸಲ್ಲಿಸಿದ್ದರು. ಮೃತರು ಪತ್ನಿ ಗಿರಿಜ, ಮಕ್ಕಳಾದ ಮಮತಾ, ರಮ್ಯಾ, ಅಳಿಯಂದಿರಾದ ಡೊಂಬಯ್ಯ, ಧರ್ಮವೀರ (ಕಾಸರಗೋಡು) ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

You cannot copy contents of this page