ಮಾದಕವಸ್ತು ಪತ್ತೆ: ಆರೋಪಿ ಸೆರೆ
ಮಂಜೇಶ್ವರ: ಉಪ್ಪಳಕ್ಕೆ ಸಮೀಪದ ಬೇಕೂರಿನಲ್ಲಿ ಕಾಸರಗೋಡು ಎಕ್ಸೈಸ್ ಸ್ಪೆಷಲ್ ಸ್ಕ್ವಾಡ್ನ ಇನ್ಸ್ಪೆಕ್ಟರ್ ಜೋಸೆಫ್ ಜೆ ನೇತೃತ್ವದ ಅಬಕಾರಿ ತಂಡ ನಡೆಸಿದ ತಪಾಸಣೆಯಲ್ಲಿ ಮಾದಕವಸ್ತುವಾದ 0.1405 ಗ್ರಾಂ ಮೆಥಾಫಿಟಮಿನ್ನ್ನು ಪತ್ತೆಹಚ್ಚಿ ವಶಪಡಿಸಿದೆ.
ಇದಕ್ಕೆ ಸಂಬಂಧಿಸಿ ಉಪ್ಪಳ ಬೇಕೂರು ಅಸ್ಮಾಬಿ ಮಂಜಿಲ್ನ ಅಹಮ್ಮದ್ ಕಬೀರ್ ಎಂ (30) ಎಂಬಾತನನ್ನು ಬಂಧಿಸಿ ಆತನ ವಿರುದ್ಧ ಎನ್ಡಿಪಿಎಸ್ ಕೇಸು ದಾಖಲಿಸ ಲಾಗಿದೆ. ಈ ಕಾರ್ಯಾಚರಣೆ ನಡೆಸಿದ ಅಬಕಾರಿ ತಂಡದಲ್ಲಿ ಅಸಿಸ್ಟೆಂಟ್ ಎಕ್ಸೈಸ್ ಆಫೀಸರ್ ಗಳಾದ ಮುರಳಿ ಕೆ.ವಿ, ಪ್ರಮೋದ್ ಕುಮಾರ್ ವಿ, ಗ್ರೇಡ್ ಪ್ರಿವೆಂಟೀವ್ ಆಫೀಸರ್ಗಳಾದ ನೌಶಾದ್ ಕೆ, ಅಜೀಶ್ ಸಿ, ಪ್ರಜಿತ್ ಕುಮಾರ್ ಕೆಆರ್, ರೀನ ಹಾಗೂ ಚಾಲಕ ಸಜಿತ್ ಎಂಬವರು ಒಳಗೊಂಡಿದ್ದರು.