ಮುಟ್ಟಂ ಕಡಪ್ಪುರದಲ್ಲಿ ಬೋಟ್ ಬೆಂಕಿಗಾಹುತಿ: ಸಮಗ್ರ ತನಿಖೆಗೆ ಸಿಪಿಎಂ ಒತ್ತಾಯ

ಬಂದ್ಯೋಡು: ಬಂದ್ಯೋಡು ಮುಟ್ಟ್ಟಂ ಕಡಪ್ಪುರದಲ್ಲಿ ಬೋಟ್ ಬೆಂಕಿಗಾಹುತಿಯಾಗಿರುವ ಘಟನೆ ಯಲ್ಲಿ ಪೊಲೀಸ್ ಸಮಗ್ರ ತನಿಖೆ ನಡೆಸಬೇಕೆಂದು ಸ್ಥಳ ಸಂದರ್ಶಿಸಿದ ಸಿಪಿಎಂ ಏರಿಯಾ ಕಾರ್ಯದರ್ಶಿ ವಿವಿ. ರಮೇಶನ್ ಒತ್ತಾಯಿಸಿದರು. ಬೆಂಕಿ ಅವಗಡದಿಂದಾಗಿ ಸುಮಾರು 5 ಲಕ್ಷ ರೂಪಾಯಿ ನಷ್ಟ ಸಂಭವಿಸಿದೆ. ಘಟನೆಯಲ್ಲಿ ಅಪರಾಧಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಅವರು ಒತ್ತಾಯಿಸಿದರು. ಪಕ್ಷದ ಲೋ ಕಲ್ ಕಾರ್ಯದರ್ಶಿ ಹಾರಿಸ್ ಪೈವ ಳಿಕೆ, ಏರಿಯಾ ಸಮಿತಿ ಸದಸ್ಯ ಸಾದಿಕ್ ಚೆರುಗೋಳಿ, ಕೊರಗಪ್ಪ ಬೇರಿಕೆ, ಅನಿಲ್ ಬೇರಿಕೆ ಎಂಬಿವರು ಜತೆಗಿದ್ದರು.

Leave a Reply

Your email address will not be published. Required fields are marked *

You cannot copy content of this page