ಯುದ್ಧ ಪರಿಹಾರವಲ್ಲ: ಎಸ್ವೈಎಸ್ನಿಂದ ಕುಂಬಳೆ ವಲಯದ ನಾಲ್ಕು ಕಡೆ ರ್ಯಾಲಿ
ಕುಂಬಳೆ: ಸಮಸ್ತ ಕೇರಳ ಸುನ್ನಿ ಯುವ ಜನ ಸಂಘ ರಾಜ್ಯದ 700 ಕೇಂದ್ರಗಳಲ್ಲಿ ಯುದ್ಧ ಪರಿಹಾರವಲ್ಲ ಎಂಬ ಘೋಷ ವಾಕ್ಯದಲ್ಲಿ ನಡೆಸಿದ ಶಾಂತಿ ರ್ಯಾಲಿಯಂ ಗವಾಗಿ ಕುಂಬಳೆ ವಲಯದಲ್ಲಿನ ನಾಲ್ಕು ಕೇಂದ್ರಗಳಲ್ಲಿ ರ್ಯಾಲಿ ನಡೆಯಿತು. ಕುಂ ಬಳೆ, ಬಂಬ್ರಾಣ, ಕಟ್ಟತ್ತಡ್ಕ, ಪೆರ್ಮುದೆ ಯಲ್ಲಿ ರ್ಯಾಲಿ ನಡೆಸಲಾಗಿದೆ. ಕುಂಬಳೆ ಯಲ್ಲಿ ಅಬ್ದುಲ್ ಅಸೀಸ್ ಸಖಾಫಿ ಮಚ್ಚಂಪಾಡಿ ಉದ್ಘಾಟಿಸಿದರು. ಬಂಬ್ರಾಣದಲ್ಲಿ ಹನೀಫ್ ಸಅದಿ ಕುಂ ಬೋಳ್, ಕಟ್ಟತ್ತಡ್ಕದಲ್ಲಿ ಹುಸೈನ್ ಸಖಾಫಿ ಅರಂತೋಡು, ಪೆರ್ಮುದೆಯಲ್ಲಿ ಸುಬೈರ್ ಬಾಡೂರು ಉದ್ಘಾಟಿಸಿದರು. ಹಲವು ಗಣ್ಯರು ಭಾಗವಹಿಸಿದರು.