ರಥಬೀದಿ ಶ್ರೀ ನಿತ್ಯಾನಂದ ಕಟ್ಟೆ ವಾರ್ಷಿಕ ದಿನಾಚರಣೆ ಕಾರ್ಯಕ್ರಮ
ಮಂಜೇಶ್ವರ: ಮಂಜೇಶ್ವರ ರಥಬೀದಿಯ ಭಗವಾನ್ ಶ್ರೀ ನಿತ್ಯಾನಂದ ಸೇವಾ ಸಮಿತಿ ಆಶ್ರಯದಲ್ಲಿ ಅವಧೂತ ಭಗವಾನ್ ಶ್ರೀ ನಿತ್ಯಾನಂದ ಕಟ್ಟೆ ಹಾಗೂ ಭಗವಾನ್ ಶ್ರೀ ನಿತ್ಯಾನಂದ ಧ್ಯಾನ ಮಂದಿರದ 15ನೇ ವಾರ್ಷಿಕ ದಿನಾಚರಣೆ ವಿವಿಧ ಕಾರ್ಯಕ್ರಮಗಳೊಂದಿಗೆ ನಿನ್ನೆ ನಡೆಯಿತು. ಬೆಳಿಗ್ಗೆ ಧ್ಯಾನ ಮಂದಿರದಲ್ಲಿ ಗಣಹೋಮ, 108 ನಾಮ ಜಪ, ನಿತ್ಯಾನಂದ ಕಟ್ಟೆಯಲ್ಲಿ ಅಶ್ವತ್ಥ ನಿತ್ಯಾನಂದ ಪೂಜೆ, ಮಧ್ಯಾಹ್ನ ಮಹಾಪುಜೆ, ಅನ್ನಸಂತರ್ಪಣೆ ನಡೆಯಿತು.