ರಾಜ್ಯದಲ್ಲಿ ವ್ಯಾಪಕಗೊಳ್ಳುತ್ತಿರುವ ಲೆಪ್ರೋಸ್ಪೈರೋಸಿಸ್ ; ಈ ವರ್ಷ 1642 ಮಂದಿಗೆ ರೋಗ; 83 ಮಂದಿ ಸಾವು


ಕಾಸರಗೋಡು: ರಾಜ್ಯದಲ್ಲಿ ಇಲಿ ಜ್ವರ ಎಂದು ಕರೆಯಲ್ಪಡುವ ಲೆಪ್ರೋಸ್ಪೈ ರೋಸಿಸ್ ಎಂಬ ರೋಗ ವ್ಯಾಪಕವಾಗಿ ಹರಡುತ್ತಿರುವುದಾಗಿ ವರದಿಯಾಗಿದೆ. ಅತೀ ಮಾರಕ ಈ ರೋಗ ಈ ವರ್ಷ 1642 ಮಂದಿಗೆ ಬಾಧಿಸಿದೆ. ಈ ಪೈಕಿ 83 ಮಂದಿ ಸಾವಿಗೀಡಾಗಿದ್ದಾರೆ. ಈ ರೋಗ ಬಾಧಿಸಿದಲ್ಲಿ ಹಲವು ದಿನಗಳ ಕಾಲ ಸೂಕ್ತ ಚಿಕಿತ್ಸೆ ಪಡೆದರೆ ಮಾತ್ರವೇ ಜೀವಾಪಾಯದಿಂದ ಪಾರಾಗಬಹು ದೆಂದು ಆರೋಗ್ಯ ರಂಗದ ತಜ್ಞರು ತಿಳಿಸುತ್ತಿದ್ದಾರೆ.
ಇನ್ನು ಮುಂದಿನ ಮೂರು ತಿಂಗಳ ಕಾಲ ಮಳೆ ತೀವ್ರಗೊಳ್ಳುವ ಈ ಸಂದರ್ಭದಲ್ಲಿ ಈ ರೋಗ ವ್ಯಾಪಕವಾಗಿ ಹರಡುವ ಸಾಧ್ಯತೆ ಇದೆಯೆಂದೂ ತಿಳಿಸಲಾಗಿದೆ. ರೋಗ ಪತ್ತೆಹಚ್ಚುವಲ್ಲಿ ಹಾಗೂ ಚಿಕಿತ್ಸೆ ನೀಡುವಲ್ಲಿ ಉಂಟಾಗುವ ವಿಳಂಬವೇ ಸಾವಿನ ಪ್ರಮಾಣ ಹೆಚ್ಚಲು ಕಾರಣವಾಗುತ್ತಿದೆ.
ಲೆಪ್ರೋಸ್ಪೈರ ಎಂಬ ಬ್ಯಾಕ್ಟೀ ರಿಯ ಈ ರೋಗ ಹರಡಲು ಕಾರಣವಾಗಿದೆ. ಪ್ರಸ್ತುತ ಈ ರೋಗ ಸೋಂಕನ್ನು ಪತ್ತೆಹಚ್ಚಲು ವ್ಯವಸ್ಥೆಗಳಿವೆ. ಅದೇ ರೀತಿ ರೋಗ ಪ್ರತಿರೋಧ ಹಾಗೂ ಚಿಕಿತ್ಸೆಗೂ ಔಷಧಗಳಿವೆ. ಆದ್ದರಿಂದ ಮಲಿನಜ ಲದಲ್ಲಿ ಕೆಲಸ ನಿರ್ವಹಿಸುವವರು ಸಹಿತ ಸಮೀಪದ ಆರೋಗ್ಯ ಕೇಂದ್ರಗಳಿಗೆ ತೆರಳಿ ತಪಾಸಣೆ ನಡೆಸಿ ಸೂಕ್ತ ಚಿಕಿತ್ಸೆ ಪಡೆಯಬೇಕೆಂದು ಆರೋಗ್ಯ ಇಲಾಖ ತಿಳಿಸುತ್ತಿದೆ. ಸರಿಯಾದ ತಪಾಸಣೆ ಹಾಗೂ ಚಿಕಿತ್ಸಾ ಸೌಕರ್ಯಗಳಿದ್ದರೂ ರೋಗ ಹರಡುವಿಕೆ ಪ್ರತಿ ವರ್ಷ ಹೆಚ್ಚುತ್ತಾ ಸಾಗುತ್ತಿದೆ.
2023ರಲ್ಲಿ 5186 ಮಂದಿಗೆ ರೋಗ ಬಾಧಿಸಿದ್ದು ಈ ಪೈಕಿ 292 ಮಂದಿ ಸಾವಿಗೀಡಾಗಿದ್ದಾರೆ. 2024ರಲ್ಲಿ 5980 ಮಂದಿಗೆ ರೋಗ ಬಾಧಿಸಿತ್ತು. ಈ ಪೈಕಿ 394 ಮಂದಿ ಸಾವಿಗೀಡಾಗಿದ್ದಾರೆಂದು ಆರೋಗ್ಯ ಇಲಾಖೆ ಮೂಲಗಳು ತಿಳಿಸುತ್ತಿವೆ. ಜ್ವರ, ಸಂದುನೋವು, ತಲೆನೋವು, ಕಣ್ಣು ಕೆಂಪಾಗುವುದು, ಹಳದ ಕಾಮಾಲೆ, ಮೂತ್ರದ ಪ್ರಮಾಣ ಕಡಿಮೆಯಾಗುವುದು ಮೊದಲಾದವುಗಳು ರೋಗದ ಲಕ್ಷಣಗಳಾಗಿವೆ. 10 ಶೇಕಡಾ ಮಂದಿಯಲ್ಲಿ ರೋಗ ತೀವ್ರಗೊಳ್ಳುತ್ತದೆ. ವಿಶೇಷವಾಗಿ ಇತರ ಅಸೌಖ್ಯವುಳ್ಳವರು ಹಾಗೂ ವಯಸ್ಕರಿಗೆ ಹೆಚ್ಚು ಬಾಧಿಸುತ್ತದೆ. ರೋಗ ತೀವ್ರಗೊಂಡರೆ ಲಿವರ್,ಕಿಡ್ನಿಗಳು, ಶ್ವಾಸಕೋಶ, ಹೃದಯ ಮೊದಲಾದ ಆಂತರಿಕ ಅವಯವಗಳನ್ನು ಬಾಧಿಸುತ್ತದೆ.

Leave a Reply

Your email address will not be published. Required fields are marked *

You cannot copy content of this page