ರಾಜ್ಯ ಸರಕಾರದ ನಾಲ್ಕನೇ ವಾರ್ಷಿಕ : 21ರಂದು ಕಾಲಿಕಡವಿನಲ್ಲಿ ಚಾಲನೆ

ಕಾಸರಗೋಡು: ಎಡರಂಗ ಸರಕಾರದ ನಾಲ್ಕನೇ ವಾರ್ಷಿಕ ಕಾರ್ಯಕ್ರಮಗಳಿಗೆ ಈತಿಂಗಳ 21ರಂದು ಜಿಲ್ಲೆಯ ಕಾಲಿಕಡವಿನಲ್ಲಿ ಚಾಲನೆ ನೀಡಲಾಗುವುದು. ಅಂದು ಬೆಳಿಗ್ಗೆ 10 ಗಂಟೆಗೆ ಕಾಲಿಕಡವು ಮೈದಾನದಲ್ಲಿ ನಡೆಯಲಿರುವ ಸರಕಾರದ ನಾಲ್ಕನೇ ವಾರ್ಷಿಕೋತ್ಸವದ ರಾಜ್ಯ ಮಟ್ಟದ ಕಾರ್ಯಕ್ರಮವನ್ನು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಉದ್ಘಾಟಿಸುವರು. ಸಚಿವ ಕೆ. ರಾಜನ್ ಅಧ್ಯಕ್ಷತೆ ವಹಿಸುವರು. ಇತರ ಸಚಿವರುಗಳಾದ ರೋಷಿ ಅಗಸ್ಟಿನ್, ಕೆ. ಕೃಷ್ಣನ್ ಕುಟ್ಟಿ, ಎ.ಕೆ. ಶಶೀಂದ್ರನ್, ರಾಮಚಂದ್ರನ್ ಕಡನ್ನಪ್ಪಳ್ಳಿ, ಕೆ.ಬಿ. ಗಣೇಶ್ ಕುಮಾರ್, ವಿರೋಧಪಕ್ಷ ನಾಯಕ ವಿ.ಡಿ. ಸತೀಶನ್, ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ ಶಾರದಾ ಮುರಳೀಧgನ್, ಸಂಸದ ರಾಜ್‌ಮೋಹನ್ ಉಣ್ಣಿತ್ತಾನ್ ಮತ್ತು ಶಾಸಕ ಎಂ. ರಾಜಗೋಪಾಲನ್ ಶುಭಾಶಂಸ ನೆಗೈದು ಮಾತನಾಡುವರು.

ಇವರ ಹೊರತಾಗಿ ಸಚಿವರಾದ ಕೆ.ಎನ್. ಬಾಲಗೋಪಾಲನ್, ಪಿ. ರಾಜೀವ್, ಪಿ.ಎ. ಮೊಹಮ್ಮದ್ ರಿಯಾಸ್, ವಿ.ಎನ್. ವಾಸನ್, ಸಜಿ ಚೆರಿಯಾನ್, ಜೆ. ಚಿಂಜುರಾಣಿ, ಜಿ.ಆರ್. ಅನಿಲ್,  ಎಂ.ಬಿ. ರಾಜೇ ಶ್, ಎ. ಶಿವನ್‌ಕುಟ್ಟಿ, ಬಿ.ಆರ್. ಕೇಳು, ವೀಣಾ ಜೋರ್ಜ್, ಆರ್. ಬಿಂದು, ಎ. ಅಬ್ದುಲ್ ರಹ್ಮಾನ್ ಮೊದಲಾದ ವರು ಭಾಗವಹಿಸುವರು.  ಸರಕಾರದ ನಾಲ್ಕನೇ ವಾರ್ಷಿಕ ಕಾರ್ಯಕ್ರಮಗಳು ಈತಿಂಗಳ 31ರಿಂದ ಮೇ 30ರ ತನಕ ಮುಂದುವರಿಯಲಿದೆ. ಇದರಂತೆ ವಿವಿಧ ದಿನಾಂಕಗಳಲ್ಲಿ ಎಲ್ಲಾ ಜಿಲ್ಲೆಗಳಲ್ಲೂ ಜಿಲ್ಲಾ ಮಟ್ಟದ ಕಾರ್ಯಕ್ರಮಗಳು ನಡೆಯಲಿದೆ. ಅದರಲ್ಲಿ ಮುಖ್ಯಮಂತ್ರಿ ಭಾಗವಹಿ ಸುವರು. ವಾರ್ಷಿಕೋತ್ಸವದ ಅಂಗವಾಗಿ ವಿವಿಧ ಕಾರ್ಯಕ್ರಮ ಗಳನ್ನು ಹಮ್ಮಿಕೊಳ್ಳಲಾಗಿದೆ. ಇದರ  ಸಮಾರೋಪ ಸಮಾರಂಭ ಮೇ 30ರಂದು ತಿರುವನಂತಪುರದಲ್ಲಿ ನಡೆಯಲಿದೆ.

Leave a Reply

Your email address will not be published. Required fields are marked *

You cannot copy content of this page