ರಾಜ್ಯ ಸರಕಾರದ ೪ನೇ ವಾರ್ಷಿಕಾಚರಣೆಯನ್ನು ಜನಪರ ಉತ್ಸವವನ್ನಾಗಿ ಮಾಡಬೇಕು- ಸಚಿವ ಎ.ಕೆ. ಶಶೀಂದ್ರನ್
ಕಾಸರಗೋಡು: ಈ ತಿಂಗಳ 21ರಿಂದ 23ರವರೆಗೆ ಜಿಲ್ಲೆಯಲ್ಲಿ ನಡೆಯುವ ಪಿಣರಾಯಿ ವಿಜಯನ್ ಸರಕಾರದ ೪ನೇ ವಾರ್ಷಿಕ ಆಚರಣೆಯನ್ನು ಜನಪರ ಉತ್ಸವವಾಗಿ ಬದಲಿಸಬೇಕೆಂದು ಜಿಲ್ಲೆಯ ಹೊಣೆಗಾರಿಕೆಯಿರುವ ಅರಣ್ಯ ಇಲಾಖೆ ಸಚಿವ ಎ.ಕೆ. ಶಶೀಂದ್ರನ್ ನುಡಿದರು. ಕಾಲಿಕ್ಕಡವ್ ಪಡುವಳಂ ಬ್ಲೋಕ್ ಪಂಚಾಯತ್ ಸಭಾಂಗಣದಲ್ಲಿ ನಡೆದ ಜಿಲ್ಲಾ ಮಟ್ಟದ ಸ್ವಾಗತ ಸಮಿತಿ ಸಭೆ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ಹಿಂದುಳಿದಿದ್ದ ಕಾಸರಗೋಡು ಜಿಲ್ಲೆಯ ಅಭಿವೃದ್ಧಿಯ ಪ್ರಗತಿಗೆ ಸಾಕ್ಷಿಯಾಗಿ ಜಿಲ್ಲೆಯಲ್ಲಿ ರಾಜ್ಯ ಮಟ್ಟದ ಕಾರ್ಯಕ್ರಮದ ಉದ್ಘಾಟನೆ ನಡೆಯುತ್ತಿದೆ ಎಂದು ಅವರು ತಿಳಿಸಿದರು. ರಾಜ್ಯ ಸರಕಾರದ ೯ ವರ್ಷದ ಅಭಿವೃದ್ಧಿ ಚಟುವಟಿಕೆಗಳನ್ನು ನೇರವಾಗಿ ಕಂಡು ತಿಳಿದುಕೊಳ್ಳಲು ವಿವಿಧ ಇಲಾಖೆಗಳ ಸ್ಟಾಲ್ಗಳನ್ನು ಸಂದರ್ಶಿಸಲು ಕುಟುಂಬ ಸಮೇತ ಎಲ್ಲರೂ ತಲುಪಬೇಕೆಂದು ಸಚಿವರು ಆಗ್ರಹಿಸಿದರು. ಸಮಸ್ತ ವಲಯಗಳಲ್ಲೂ ಜನಪರ ಸರಕಾರ ಸಾಧಿಸಿದ ಸಾಧನೆಗಳ ದೃಶ್ಯಾವಿಷ್ಕಾರ ವಾಗಿರುತ್ತದೆ ನನ್ನ ಕೇರಳ ಪ್ರದರ್ಶನ ಮಾರಾಟ ಮೇಳದಲ್ಲಿ ಇರುವುದೆಂದು ಸಚಿವರು ನುಡಿದರು.
ಶಾಸಕ ಎಂ. ರಾಜಗೋಪಾಲ್ ಅಧ್ಯಕ್ಷತೆ ವಹಿಸಿದರು. ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಪಿ. ಬೇಬಿ ಬಾಲಕೃಷ್ಣನ್, ವಿವಿಧ ಬ್ಲೋಕ್, ಪಂಚಾಯತ್ಗಳ ಅಧ್ಯಕ್ಷರು, ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಭಾಗವಹಿಸಿದರು. ಎಡಿಎಂ ಪಿ. ಅಖಿಲ್ ಸ್ವಾಗತಿಸಿ, ಜಿಲ್ಲಾ ವಾರ್ತಾಧಿಕಾರಿ ಎಂ. ಮಧುಸೂದನನ್ ವಂದಿಸಿದರು.