ವಿವಿಧೆಡೆಗಳಲ್ಲಿ ಅಬಕಾರಿ ದಾಳಿ: ಮಾದಕದ್ರವ್ಯ, ಕರ್ನಾಟಕ ಮದ್ಯ, ಹುಳಿರಸ ವಶ
ಕಾಸರಗೋಡು: ಅಬಕಾರಿ ತಂಡ ಜಿಲ್ಲೆಯ ವಿವಿಧೆಡೆಗಳಲ್ಲಿ ನಡೆಸಿದ ಕಾರ್ಯಾಚ ರಣೆಗಳಲ್ಲಾಗಿ ಮಾದಕದ್ರವ್ಯ, ಕರ್ನಾಟಕ ನಿರ್ಮಿತ ಮದ್ಯ ಹಾಗೂ ಹುಳಿರಸ ಪತ್ತೆಹಚ್ಚಿ ವಶಪಡಿಸಿಕೊಂ ಡಿದೆ. ನಗರದ ಕರಂದಕ್ಕಾಡ್ನ ಮನೆಯೊಂದರ ಬಳಿ ಕಾಸರಗೋಡು ಎಕ್ಸೈಸ್ ರೇಂಜ್ ಇನ್ಸ್ಪೆಕ್ಟರ್ ಜೋಸೆಫ್ ಜೆ ನೇತೃತ್ವದ ಅಬಕಾರಿ ತಂಡ ನಿನ್ನೆ ನಡೆಸಿದ ದಾಳಿಯಲ್ಲಿ ಅಕ್ರಮವಾಗಿ ಬಚ್ಚಿಡಲಾಗಿದ್ದ 34.56 ಲೀಟರ್ ಕರ್ನಾಟಕ ನಿರ್ಮಿತ ಮದ್ಯ ಪತ್ತೆಹಚ್ಚಿದೆ. ಇದಕ್ಕೆ ಸಂಬಂಧಿಸಿ ದಿನೇಶ ಎಂಬಾತನ ವಿರುದ್ಧ ಕೇಸು ದಾಖಲಿಸಲಾಗಿದೆಯೆಂದೂ ಆತ ಆವೇಳೆ ಪರಾರಿಯಾಗಿದ್ದು, ಬಂಧಿಸಲು ಸಾಧ್ಯವಾಗಿಲ್ಲವೆಂದು ಅಬಕಾರಿ ಅಧಿಕಾರಿಗಳು ತಿಳಿಸಿದ್ದಾರೆ. ಕಾರ್ಯಾಚರಣೆ ನಡೆಸಿದ ತಂಡದಲ್ಲಿ ಪ್ರಿವೆಂಟೀವ್ ಆಫೀಸರ್ಗಳಾದ ಉಣ್ಣಿಕೃಷ್ಣನ್ ಕೆ, ರಂಜಿತ್ ಕೆ.ವಿ, ಸಿವಿಲ್ ಎಕ್ಸೈಸ್ ಆಫೀಸರ್ಗಳಾದ ಶ್ಯಾಮ್ಜಿತ್ ಎಂ, ಶಂಸುದ್ದೀನ್ ವಿ.ಟಿ ಮತ್ತು ಚಾಲಕ ಜೋಸೆಫ್ ಎಂಬವರು ಒಳಗೊಂಡಿದ್ದರು.
ಇನ್ನೊಂದೆಡೆ ಕಾಸರಗೋಡು ಎಕ್ಸೈಸ್ ಸ್ಪೆಷಲ್ ಸ್ಕ್ವಾಡ್ನ ಎಕ್ಸೈಸ್ ಸರ್ಕಲ್ ಇನ್ಸ್ಪೆಕ್ಟರ್ ಪ್ರಶೋಬ್ ಕೆ.ಎಸ್ ನೇತೃತ್ವದ ಅಬಕಾರಿ ತಂಡ ಮಂಗಲ್ಪಾಡಿ ವೀರನಗರ ಅಡ್ಕದಲ್ಲಿ ನಿನ್ನೆ ನಡೆಸಿದ ಕಾರ್ಯಾಚರಣೆಯಲ್ಲಿ ಮಾದಕವಸ್ತುವಾದ 0.22 ಗ್ರಾಂ ಮೆಥಾಫಿಟಾಮಿನ್ ಪತ್ತೆಹಚ್ಚಿ ವಶಪಡಿಸಿದೆ. ಇದಕ್ಕೆ ಸಂಬಂಧಿಸಿ ವೀರನಗರ ಅಡ್ಕದ ಮೊಹಮ್ಮದ್ ಶದ್ಮಾನ್ (22) ಎಂಬಾತನನ್ನು ಬಂಧಿಸಿ ಕೇಸು ದಾಖಲಿಸಲಾಗಿದೆ. ಅಸಿಸ್ಟೆಂಟ್ ಎಕ್ಸೈಸ್ ಇನ್ಸ್ಪೆಕ್ಟರ್ (ಗ್ರೇಡ್) ಮುರಳಿ ಕೆ.ವಿ, ಪ್ರಿವೆಂಟೀವ್ ಆಫೀಸರ್ (ಗ್ರೇಡ್) ನೌಶಾದ್, ಸಿವಿಲ್ ಪೊಲೀಸ್ ಆಫೀಸರ್ಗಳಾದ ಅತುಲ್ ಟಿ.ವಿ, ಸೋನು ಸೆಬಾಸ್ಟಿನ್, ಶಿಜಿತ್ ವಿ.ಎ ಮತ್ತು ಚಾಲಕ ಸಜೀಶ್ ಪಿ ಎಂಬವರು ಈ ಕಾರ್ಯಾಚರಣೆ ನಡೆಸಿದ ತಂಡದಲ್ಲಿ ಒಳಗೊಂಡಿದ್ದರು. ಇದೇ ರೀತಿ ವೆಳ್ಳರಿಕುಂಡು ಪಡೆಯಂಕಲ್ಲು ಎಂಬಲ್ಲಿ ನೀಲೇಶ್ವರ ಅಬಕಾರಿ ರೇಂಜ್ನ ಅಸಿಸ್ಟೆಂಟ್ ಎಕ್ಸೈಸ್ ಇನ್ಸ್ಪೆಕ್ಟರ್ (ಗ್ರೇಡ್) ಪಿ. ರಾಜನ್ ನೇತೃತ್ವದ ಅಬಕಾರಿ ತಂಡ ನಡೆಸಿದ ಕಾರ್ಯಾಚರಣೆಯಲ್ಲಿ ಕಳ್ಳಬಟ್ಟಿ ಸಾರಾಯಿತಯಾರಿಗಾಗಿ ಸಿದ್ಧಪಡಿಸಿದ್ದ ೫೦ ಲೀಟರ್ ಹುಳಿರಸ (ವಾಶ್)ನ್ನು ಪತ್ತೆಹಚ್ಚಿ ವಶಪಡಿಸಿದೆ. ಅಬಕಾರಿ ಸಿಬ್ಬಂದಿಗಳಾದ ಬಾಬು, ದಿನೂಪ್, ನಸರುದ್ದೀನ್, ಸಜ್ಞ ಮತ್ತು ಚಾಲಕ ರಾಜೀವನ್ ಎಂಬವರು ಅಬಕಾರಿ ಕಾರ್ಯಾಚರಣೆ ನಡೆಸಿದ ತಂಡದಲ್ಲಿ ಒಳಗೊಂಡಿದ್ದರು.