ವಿವಿಧ ಬೇಡಿಕೆ ಆಗ್ರಹಿಸಿ ಕಿಸಾನ್ಸೇನೆ ಆಶ್ರಯದಲ್ಲಿ ಕಂಗು ಕೃಷಿಕರ ಜಿಲ್ಲಾ ಸಮ್ಮೇಳನ
ಬದಿಯಡ್ಕ: ಹವಮಾನ ವೈಪರೀತ್ಯ ದಿಂದಾಗಿ ಕಂಗು ಕೃಷಿಗೆ ತಗಲಿದ ಹಳದಿ ರೋಗ, ಎಲೆ ಚುಕ್ಕಿ ರೋಗ, ಹಿಂಗಾರ ಕರಟುವುದು, ಮಹಾಳಿ ರೋಗ ಎಂಬಿವುಗಳಿಗೆ ಭೂಮಿಯ ವಿಸ್ತೀರ್ಣ ನೋಡದೆ ಪಂಚಾಯತ್ನ ಸ್ವಂತ ನಿಧಿ ಉಪಯೋಗಿಸಿ ಔಷಧಿ ಸಿಂಪಡಿಸ ಬೇಕು, ಕೃಷಿ ಸಾಲದ ಬಡ್ಡಿ ಮನ್ನಾ ಮಾಡಬೇಕು ಸಹಿತ ವಿವಿಧ ಬೇಡಿಕೆಗಳನ್ನು ಮುಂದಿಟ್ಟು, ಜಿಲ್ಲಾ ಕಿಸಾನ್ ಸೇನೆ ಆಶ್ರಯದಲ್ಲಿ ಬದಿಯಡ್ಕ ಗುರುಸದನದಲ್ಲಿ ನಡೆದ ಸಮ್ಮೇಳವನ್ನು ಶಾಸಕ ಎನ್.ಎ. ನೆಲ್ಲಿಕುನ್ನು ಉದ್ಘಾಟಿ ಸಿದರು. ಬೆಳೆ ನಷ್ಟಗೊಂಡವರಿಗೆ ಸೂP ವಾದ ನಷ್ಟ ಪರಿಹಾರ ನೀಡಬೇಕು, ಜಿಲ್ಲೆಗೆ ಆರ್ಥಿಕ ಪ್ಯಾಕೇಜ್ ಮಂಜೂರುಗೊಳಿಸ ಬೇಕು, ಜಪ್ತಿ, ಹರಾಜು ಕ್ರಮಗಳನ್ನು ನಿಲ್ಲಿಸಬೇಕು, ಕೃಷಿ ಇಲಾಖೆ ಘೋಷಿ ಸಿದ ಜಿಲ್ಲೆಯ ಕಂಗು ಕೃಷಿಯಲ್ಲಿ ಉಂ ಟಾದ ನಷ್ಟ ಲೆಕ್ಕ ಹಾಕಿ ವರದಿ ಸಲ್ಲಿಸಲು ತುರ್ತು ಕ್ರಮ ಸ್ವೀಕರಿಸಬೇಕು ಎಂಬಿ ತ್ಯಾದಿ ಬೇಡಿಕೆಗಳನ್ನು ಸಮ್ಮೇಳನದಲ್ಲಿ ಆಗ್ರಹಿಸಲಾಯಿತು. ಗೋವಿಂದ ಭಟ್ ಕೊಟ್ಟಂಗುಳಿ ಅಧ್ಯಕ್ಷತೆ ವಹಿಸಿದರು. ಚಂದ್ರಶೇಖರ್ ರಾವ್ ಕಲ್ಲಗ, ಸಿಜಿ ಮ್ಯಾಥ್ಯು, ಶ್ಯಾಮ್ಪ್ರಸಾದ್ ಮಾನ್ಯ, ಕೃಷಿ ಅಧಿಕಾರಿ ರಾಘವೇಂದ್ರ ಪಿ., ಜ್ಯೋತಿ ಕುಮಾರಿ ಕೆ.ಎನ್., ಅಶ್ವಿನಿ ಎಂ.ಎಲ್., ಮಾಹಿನ್ ಕೇಳೋಟ್, ಎಂ. ಕೃಷ್ಣನ್, ಡಾ. ಚೈತ್ರಾ ಎಂ., ಡಾ. ಡಾಲಿಯಾ ಮೋಳ್, ಅಜಿತ್ ಕುಮಾರ್, ಪದ್ಮಶ್ರೀ ಸತ್ಯನಾರಾಯಣ ಬೆಳೇರಿ, ಸುಲೈಖ ಮಾಹಿನ್, ನಾಸಿರ್ ಚೆರ್ಕಳ ಮಾತನಾಡಿದರು. ಶುಕೂರ್ ಕಾಣಜೆ ಸ್ವಾಗತಿಸಿ, ಸಚಿನ್ ಕುಮಾರ್ ಮಾಟಡ್ಕ ವಂದಿಸಿದರು.