ವಿ.ಹಿಂ.ಪದಿಂದ ಉಪ್ಪಳದಲ್ಲಿ ಪ್ರತಿಭಟನೆ
ಉಪ್ಪಳ: ಕಾಶ್ಮೀರದ ಪಹಲ್ಗಾ ಮ್ನಲ್ಲಿ ಹಿಂದೂ ನರಮೇಧವನ್ನು ನಡೆಸಿದ ಉಗ್ರಗಾಮಿಗಳ ವಿರುದ್ದ ವಿಶ್ವಹಿಂದೂ ಪರಿಷತ್ ಮಂಗಲ್ಪಾಡಿ ಇದರ ವತಿಯಿಂದ ಪ್ರತಿಭಟನಾ ಮೆರವಣಿಗೆ ನಿನ್ನೆ ಸಂಜೆ ನಡೆಯಿತು. ಕೈಕಂಬದಿAದ ಹೊರಟ ಮೆರವಣಿಗೆ ಉಪ್ಪಳದಲ್ಲಿ ಸಮಾಪ್ತಿಗೊಂಡಿತು. ಬಿಜೆಪಿ ನೇತಾರರಾದ ವಿಜಯ ಕುಮಾರ್ ರೈ, ಪದ್ಮ ಟೀಚರ್ ಮಾತ ನಾಡಿದರು. ಸತೀಶ್ ಒಡ್ಡಂಬೆಟ್ಟು ಸ್ವಾಗತಿಸಿ, ಸುರೇಶ್ ಶೆಟ್ಟಿ ಪರಂಕಿಲ ವಂದಿಸಿ ದರು. ಪ್ರತಿಭಟನೆಯಲ್ಲಿ ಮಾತೆಯರ ಸಹಿತ ಸಂಘ ಪರಿವಾರದ ನೇತಾರರು, ಕಾರ್ಯಕರ್ತರು ಭಾಗವಹಿಸಿದರು.