ವ್ಯಾಪಾರಿ ವ್ಯವಸಾಯಿ ಏಕೋಪನಾ ಸಮಿತಿಯಿಂದ ಪಂಚಾಯತ್ ಕಚೇರಿ ಧರಣಿ
ಕಾಸರಗೋಡು: ಅನ್ಯಾಯವಾಗಿ ಹೆಚ್ಚಿಸಿದ ಉದ್ಯೋಗ ತೆರಿಗೆಯನ್ನು ಹಿಂತೆಗೆಯಬೇಕು, ಹಸಿರು ಕ್ರಿಯಾಸೇನೆಯ ಸೇವೆ ಅಗತ್ಯವಿಲ್ಲದ ವ್ಯಾಪಾರಿಗಳಿಂದ ಯೂಸರ್ಫಿ ಪಡೆಯುವುದನ್ನು ನಿಲ್ಲಿಸಬೇಕು ಮುಂತಾದ ಬೇಡಿಕೆಗಳನ್ನು ಮುಂದಿರಿಸಿ ಕೇರಳ ವ್ಯಾಪಾರಿ ವ್ಯವಸಾಯಿ ಏಕೋಪನಾ ಸಮಿತಿ ಪೆರಿಯ, ಅಂಬಲತ್ತರ, ಕಲ್ಯೋಟ್, ಪುಲ್ಲೂರು, ಚಾಲಿಂಗಾಲ್ ಘಟಕ ಸಮಿತಿಗಳ ನೇತೃತ್ವದಲ್ಲಿ ಪುಲ್ಲೂರು ಪೆರಿಯ ಪಂಚಾಯತ್ ಕಚೇರಿಯ ಮುಂದೆ ಧರಣಿ ನಡೆಸಲಾಯಿತು. ಜಿಲ್ಲಾ ಕಾರ್ಯದರ್ಶಿ ಕುಂಞಿರಾಮನ್ ಆಕಾಶ್ ಉದ್ಘಾಟಿಸಿದರು. ಅಂಬಲತ್ತರ ಘಟಕ ಅಧ್ಯಕ್ಷ ಜಯರಾಜನ್ ಕಣ್ಣೋತ್ತ್ ಅಧ್ಯಕ್ಷತೆ ವಹಿಸಿದರು. ಪುಲ್ಲೂರು ಘಟಕ ಅಧ್ಯಕ್ಷ ಗೋಪಾಲನ್ ಪುಲ್ಲೂರು, ಜೋನ್ಸನ್ ಕಲ್ಯೋಟ್, ಪೀತಾಂಬರನ್ ಚಾಲಿಂಗಾಲ್, ಮಹಿಳಾ ವಿಂಗ್ ರಾಜ್ಯ ಕಾರ್ಯದರ್ಶಿ ಸರಿಜಬಾಬು, ಅಬ್ದುಲ್ಲ ಶಾಫಿ, ಸಜನ ನಾರಾಯಣನ್, ಕೆ.ಪಿ. ಅಬ್ದುಲ್ ಸತ್ತಾರ್, ಉದಯ ಕುಮಾರ್, ಪಿ.ವಿ. ಕುಂಞಿಕಣ್ಣನ್, ಬೇಬಿ ಮಧು, ಇ. ನಾರಾಯಣನ್, ಕೆ. ರಮೇಶ್ ಕುಮಾರ್ ಮಾತನಾಡಿದರು.