ಸಭಾಂಗಣದ ಮಾಲಕ, ಪತ್ನಿ ಕೊಲೆಗೀಡಾದ ಸ್ಥಿತಿಯಲ್ಲಿ ಪತ್ತೆ
ಕೋಟಯಂ: ಸಭಾಂಗಣದ ಮಾಲಕ ಹಾಗೂ ಪತ್ನಿ ಮನೆಯೊಳಗೆ ಕೊಲೆಗೀಡಾದ ಸ್ಥಿತಿಯಲ್ಲಿ ಪತ್ತೆಯಾಗಿ ದ್ದಾರೆ. ಕೋಟಯಂ ತಿರುವಾದಿಲ್ಕಲ್ ವಿಜಯ ಕುಮಾರ್, ಪತ್ನಿ ಮೀರ ಕೊಲೆಗೀಡಾದವರು. ಇವರಿಬ್ಬರೂ ರಕ್ತದ ಮಡುವಿನಲ್ಲಿ ಮನೆಯೊಳಗೆ ಕಂಡು ಬಂದಿದ್ದಾರೆ. ಇಂದು ಮುಂಜಾನೆ ಮನೆಗೆ ತಲುಪಿದ ಮನೆ ಕೆಲಸದಾಳು ಇವರಿಬ್ಬರು ಮೃತಪಟ್ಟ ಸ್ಥಿತಿಯಲ್ಲಿ ಕಂಡಿದ್ದಾಳೆ. ಕೂಡಲೇ ನೆರೆಮನೆಯ ವರನ್ನು ಹಾಗೂ ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲೀಸರು ನಡೆಸಿದ ಪ್ರಾಥಮಿಕ ತನಿಖೆಯಲ್ಲಿ ಕೊಲೆ ಎಂದು ಖಚಿತಪಡಿಸಲಾಗಿದೆ. ಇಂದ್ರಪ್ರಸ್ತಂ ಸಭಾಂಗಣದ ಮಾಲಕನಾಗಿದ್ದಾರೆ. ವಿಜಯಕುಮಾರ್.